ಕಲಬುರಗಿ; ನಗರದ ಸರಕಾರಿ ಪದವಿ ಪೂರ್ವ ಎಂಪಿಹೆಚ್ಎಸ್ ಕಾಲೇಜಿನಲ್ಲಿ ಸುಜಯ ಎಜ್ಯಕೇಷನ್ ಮತ್ತು ವೇಲ್ ಫೇರ್ ಸೊಸೈಟಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪದವಿ ಪೂರ್ವ ಎಂಪಿಹೆಚ್ಎಸ್ ಕಾಲೇಜು ವತಿಯಿಂದ ಸಂಜಯ ಜನ್ಮದಿನದ ಅಂಗವಾಗಿ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾಗಿ ಮಲ್ಲೇಶಿ ನಾಟೇಕಾರ, ರಾಜೇಂದ್ರ ದೊಡ್ಡಮನಿ, ಎಂ.ಬಿ.ನಿಂಗಪ್ಪ, ಮಾನು ಸಗರ, ಡಾ.ಸುನಿಲಕುಮಾರ ಒಂಟಿ, ಜಯಶ್ರೀ ಎಸ್.ಒಂಟಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಇದ್ದರು.