ಮಾಧ್ಯಮ ರತ್ನ, ಶೈಷಣಿಕ ಕ್ರಾಂತಿ, ಕೃಷಿ ಕಾಯಕರತ್ನ, ಸಮಾಜ ಸೇವಾರತ್ನ ಪ್ರಶಸ್ತಿ ಪ್ರಧಾನ

0
34

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜೇವರ್ಗಿ ತಾಲ್ಲೂಕು ಘಟಕದ ವತಿಯಿಂದ ಆ.೮ರಂದು ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೧೧ಗಂಟೆಗೆ ಪತ್ರಿಕಾ ದಿನಾಚರಣೆ ಹಾಗೂ ಶೈಷಣಿಕ ಕ್ರಾಂತಿ, ಕೃಷಿ ಕಾಯಕರತ್ನ, ಸಮಾಜ ಸೇವಾರತ್ನ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಆಲೂರ ತಿಳಿಸಿದ್ದಾರೆ.

ಶಾಸಕ ಡಾ. ಅಜಯಸಿಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಪುರಸಭೆ ಅಧ್ಯಕ್ಷೆ ಶರಣಮ್ಮ ತಳವಾರ, ಉಪಾಧ್ಯಕ್ಷ ಗುರುಶಾಂತಯ್ಯ ಹಿರೇಮಠ, ಪ್ರಮುಖರಾದ ರಮೇಶಬಾಬು ವಕೀಲ, ರಾಜಶೇಖರ ಸೀರಿ, ರಾಜ್ಯ ಬಿಜೆಪಿ ಓಬಿಸಿ ಉಪಾಧ್ಯಕ್ಷೆ ಶೋಭಾ ಬಾಣಿ, ಜಿ.ಪಂ. ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ, ಅಡತ್ ವರ್ತಕರ ಸಂಘದ ಅಧ್ಯಕ್ಷ ಬಿ.ಎನ್.ಪಾಟೀಲ ಚನ್ನೂರ, ಕಾರ್ಯದರ್ಶಿ ಬಸವರಾಜ ಸಾಸಾಬಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಶಿವರಂಜನ್ ಸತ್ಯಂಪೇಟೆ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ್, ರಾಜ್ಯ ಮಾಧ್ಯಮ ಅಕಾಡೆಮಿ ಸದಸ್ಯ ದೇವಿಂದ್ರಪ್ಪ ಕಪನೂರ ಉಪಸ್ಥಿತರಿರಲಿದ್ದಾರೆ.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಪ್ರಶಸ್ತಿ ನೀಡಿ ಗೌರವಿಸಲಿದ್ದು, ಸೊನ್ನ ದಾಸೋಹ ಮಠದ ಪೀಠಾಧಿಪತಿ ಡಾ. ಶಿವಾನಂದ ಸ್ವಾಮೀಜಿ (ಶೈಕ್ಷಣಿಕ ಕ್ರಾಂತಿ ಪ್ರಶಸ್ತಿ), ಶಖಾಪುರ ತಪೋವನಮಠದ ಪೀಠಾಧಿಪತಿ ಡಾ.ಸಿದ್ಧರಾಮ ಶಿವಾಚಾರ್ಯರಿಗೆ (ಕೃಷಿ ಕಾಯಕ ರತ್ನ ಪ್ರಶಸ್ತಿ),ಉದ್ದಿಮೆದಾರ ಸಮಾಧಾನ ಪೂಜಾರಿ ಅವರಿಗೆ (ಸಮಾಜ ಸೇವಾ ರತ್ನ ಪ್ರಶಸ್ತಿ), ಜೇವರ್ಗಿ ಸಾರಿಗೆ ಘಟಕದ ಚಾಲಕ ಪ್ರದೀಪಕುಮಾರ ಆಲಬಾಳ ಅವರಿಗೆ (ಅಪಘಾತ ರಹಿತ ಚಾಲನೆ ಪ್ರಶಸ್ತಿ), ಉದ್ದಿಮೆದಾರ ಶರಣು ಅವರಾದ ಹಾಗೂ ವಿದ್ಯಾರ್ಥಿ ನಿಖೀಲ ಇಬ್ರಾಹಿಂಪುರ ಅವರಿಗೆ (ಪರಿಶ್ರಮಜೀವಿ ಪ್ರಶಸ್ತಿ), ನೀಡಲಾಗುವುದು.

ಪತ್ರಕರ್ತರಾದ ಸದಾನಂದ ಜೋಶಿ, ಪ್ರವೀಣ ರೆಡ್ಡಿ, ಸಂಜಯ ಚಿಕ್ಕಮಠ, ಶರಣಯ್ಯಸ್ವಾಮಿ, ಅರುಣ ಕದಂ, ಓಂಪ್ರಕಾಶ ಮುನ್ನುರ, ಅನೀಲಸ್ವಾಮಿ, ಗೋಪಾಲರಾವ ಕುಲಕರ್ಣಿ, ರಾಜಶೇಖರ ಸ್ವಾಮಿ, ಪುರುಷೋತ್ತಮ ಕುಲಕರ್ಣಿ,ಭಜರಂಗಿ, ಶ್ರೀಕಾಂತ, ಒಟ್ಟು ೧೨ ಜನರಿಗೆ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಆಲೂರ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here