ಶಹಾಬಾದ :ನಂದೂರ(ಕೆ) ಗ್ರಾಪಂ ಉಪಾಧ್ಯಕ್ಷರಾದ ರಮಾದೇವಿ ನಾಗರಾಜ ಕಲ್ಲಾ ಅವರು ಗುರುವಾರ ಗ್ರಾಪಂ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಈ ಹಿಂದಿನ ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಯಾದ ಕಾರಣ ಸಹಾಯಕ ಆಯುಕ್ತರು ಅಧ್ಯಕ್ಷ ಸ್ಥಾನ ರದ್ದುಗೊಳಿಸಿದರು.ಅಲ್ಲದೇ ನೂತನ ಅಧ್ಯಕ್ಷರ ಆಯ್ಕೆಯಾಗುವ ತನಕ ನೂತನ ಗ್ರಾಪಂ ಅಧ್ಯಕ್ಷರ ಪ್ರಭಾರವನ್ನು ಗ್ರಾಪಂ ಉಪಾಧ್ಯಕ್ಷರಾದ ರಮಾದೇವಿ ಕಲ್ಲಾ ಅವರಿಗೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದ ರಮಾದೇವಿ ಕಲ್ಲಾ, ಗ್ರಾಪಂ ಅಧ್ಯಕ್ಷ ಸ್ಥಾನ ಅತ್ಯಂತ ಜವಾಬ್ದಾರಿಯುತವಾಗಿದೆ. ಕೆಲವೇ ದಿನಗಳಿಗಾಗಿ ಪ್ರಭಾರ ಹುದ್ದೆ ವಹಿಸಿಕೊಂಡಿದ್ದು, ಈ ಸ್ಥಾನಕ್ಕೆ ಗೌರವ ತರುವ ನಿಟ್ಟಿನಲ್ಲಿ ಜನಪರ ಕೆಲಸ ಮಾಡಲು ನಾನು ಬದ್ಧನಾಗಿದ್ದೆನೆ.ಸಾರ್ವಜನಿಕರು ನೈರ್ಮಲ್ಯ ಹಾಗೂ ಇತರೆ ಯಾವುದೇ ಕೆಲಸಗಳು ಇದ್ದರೇ ನನ್ನನ್ನು ನೇರವಾಗಿ ಸಂಪರ್ಕಿಸಿ.ಅದನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಕೆಲಸ ಮಾಡುತ್ತೆನೆ.ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಹಾಗೂ ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ಪ್ರಜೆಗೂ ಸರಕಾರಿ ಸೌಲಭ್ಯ ಒದಗಿಸುವುದರಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಂಕರ ನಡುವಿನಮನಿ, ಶಿವಕುಮಾರ ಹಿರೇಗೌಡ, ಮಹಾಂತಗೌಡ ಪಾಟೀಲ,ಶಾಂತಪ್ಪ ಪೂಜಾರಿ, ಶಾಮಣ್ಣ ದಂಡಿನ್, ರೇವಣಸಿದ್ದ ಪಾಟೀಲ, ಗುರುಶಾಂತಪ್ಪ ಹರಳಯ್ಯ,ಬಸವಂತರಾಯ ಹೂಗಾರ, ಪಾಂಡು ಪವಾರ, ಅಂಬಣ್ಣ ಅಕ್ಕಲಕೋಟ, ಚಂದ್ರಕಾಂತ ಗೊಬ್ಬೂರ್, ಅಂಬಾರಾಯ ಭಾವಿಮನಿ,ಉದಯಕುಮಾರ ನಾಟೇಕಾರ, ಶರಣು ಕಲ್ಲಾ, ನಾಗರಾಜ ಕಲ್ಲಾ, ಕಾರ್ಯದರ್ಶಿ ಕಲ್ಯಾಣಿ, ಸಂತೋಷ, ಶಿವಶರಣ, ಜಗನ್ನಾಥ ದೇಸಾಯಿ, ಮಹಾಂತೇಶ ಕಲ್ಲಾ,ಚೈತ್ರಾ ಪಾಟೀಲ ಇತರರು ಇದ್ದರು.