ಕಲಬುರಗಿ: ಸ್ವತಂತ್ರ ಭಾರತ ೭೫ ನೇ ವರ್ಷದ ಅಮೃತ ಮಹೋತ್ಸವದ ನಿಮಿತ್ಯ ಹರ್ ಘರ್ ತಿರಂಗಾ ಅಭಿಯಾನವನ್ನು ನಗರದ ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಗನಾಥ ಸೂರ್ಯವಂಶಿ, ಹಿರಿಯ ವಕೀಲರಾದ ಗುರುರಾಜ ತಿಳಗೋಳ, ಡಾ.ವೇದಮೂರ್ತಿ, ಹೋರಾಟಗಾರ ದತ್ತು ಭಾಸಗಿ, ಮಂಜುನಾಥ ನಾಲವಾರಕರ್, ರಾಮ ಪೂಜಾರಿ, ಬಾಬು ಪರಿಟ, ರಾಘವೇಂದ್ರ ಕುಲಕರ್ಣಿ, ವೆಂಕಟೇಶ ಎಸ್, ಬಿ ಲಕ್ಷ್ಮಿ, ಸೂಮಲಿಂಗ ಬಾಬಜೀ ಇದ್ದರು.