ಕಲಬುರಗಿ: ೭೫ ನೇ ಸ್ವತಂತ್ರ ಭಾರತದ ಅಮೃತ ಮಹೋತ್ಸವ ಮುನ್ನಾದಿನದಂದು ಎಸ್.ಎಸ್.ತೆಗನೂರ ಮಹಾವಿದ್ಯಾಲಯದ ವತಿಯಿಂದ ಮೂರು ದಿನಗಳ ವರೆಗೆ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಕಾಲೇಜಿನ ಸಂಸ್ಥೆಯ ಪ್ರಾಚಾರ್ಯರಾದ ಡಾ.ಜ್ಯೋತಿ ಆರ್.ತೆಗನೂರ ತಿಳಿಸಿದ್ದಾರೆ.
ಆ.೧೩.ರಂದು ನಗರದ ರಾಮ ಮಂದಿರ ಹಿಂದುಗಡೆ ಇವರು ಶೈಕ್ಷಣಿಕ ಭವನದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು, ೧೪.ರಂದು ಜಗತ್ ವೃತ್ತದಿಂದ ತಿಮ್ಮಾಪೂರ ವೃತ್ತದ ವರೆಗೆ ವಾಕಥಾನ್ (ಹರ್ ಘರ್ ತಿರಂಗಾ), ಕಾಲೇಜಿನಲ್ಲಿ ರಕ್ತದಾನ ಶಿಬಿರ, . ಸಾಹಿತ್ಯ ಸ್ಪರ್ಧೆ, ೧೫.ರಂದು ಕಾಲೇಜಿನಲ್ಲಿ ಧ್ವಜಾರೋಹಣ, ಬಹುಮಾನ ವಿತರಣೆ, ಸಾಂಪ್ರದಾಯಿಕ ಉಡುಗೆ, ಮೂರು ದಿನಗಳ ಕಾಲ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.