ಶ್ರೀ ರಾಘವೇಂದ್ರ ಸ್ವಾಮಿಗಳ ವೈಭವದ ಆರಾಧನೆ

0
68

ಕಲಬುರಗಿಯ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಬೆಳಿಗ್ಗೆ ರಾಯರ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಪವಮಾನ ಹೋಮ, ಶ್ರೀ ರಾಘವೇಂದ್ರ ಸ್ವಾಮಿಗಳ ಪಲ್ಲಕ್ಕಿ ಉತ್ಸವ, ನಂತರ ಶ್ರೀ ರಾಘವೇಂದ್ರ ಮಹಿಮಾಮೃತ ಪ್ರವಚನವನ್ನು ಪಂ ಶ್ರೀನಿವಾಸಾಚಾರ್ಯ ಪದಕಿ ಅವರು ನೆರವೇರಿಸಿದರು, ನಂತರ ಹಸ್ತೋದಕ, ಮಹಾಮಂಗಳಾರತಿ, ನಂತರ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.

Contact Your\'s Advertisement; 9902492681

ಅರ್ಚಕರಾದ ಗುಂಡಾಚಾರ್ಯ ನರಿಬೊಳ, ಡಿ ವಿ ಕುಲಕರ್ಣಿ, ಪ್ರಮೋದ ಪಂತ, ಗುರುರಾಜ ಬಂಕುರ್, ರಾಜಾಪುರ್ ಮಾಲಿಕೆ ಸದಸ್ಯರಾದ ಹೊನ್ನಮ್ಮ ಬಾಬು, ಮಹಿಳಾ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here