ಕಲಬುರಗಿ: ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ಅವರು ಶಾಸಕರಾದ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬದ ಸದಸ್ಯರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದು ಖಂಡನಿಯವಾಗಿದೆ. ಎಂದು ಜಿಲ್ಲಾ ಯುವ ಕಾಂಗ್ರೇಸ್ ಮುಖಂಡ ಅಶ್ವಿನ ಸಂಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ನಾಯಕರಾಗಿರುವ ಅವರು, ಯಾವುದೇ ಸಾಕ್ಷ್ಯಗಳಿಲ್ಲದೆ ಅವರು ಆರೋಪ ಮಾಡುವಂತಹ ವ್ಯಕ್ತಿಯಲ್ಲ ಸೇಡಂ ತಾಲೂಕಿನ ಶಾಸಕ ರಾಜಕುಮಾರ್ ಪಾಟೀಲ ತೆಲ್ಕೂರ್ ಅವರಿಗೆ ಸ್ವಲ್ಪವಾದರೂ ಆತ್ಮ ಗೌರವ ಇದ್ದರೆ ಅವರು ಈ ಕೂಡಲೇ ಪ್ರಿಯಾಂಕ್ ಖರ್ಗೆ ಜಿ ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ರಾಜಕುಮಾರ್ ತೆಲ್ಕೂರ್ ಅವರ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಸಂಕಾ ಅವರು ಪಾಟೀಲ ಅವರಿಗೆ ಎಚ್ಚರಿಕೆ ನೀಡಿದ್ದಾರೆ.