ಕಲಬುರಗಿ : ನಗರದ ಪತ್ರಿಕಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಘಟಕ ಹಮ್ಮಿಕೊಂಡ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಜಿಪಂ ಸಿಇಓ ಡಾ.ಗಿರೀಶ ಬದೋಲೆ ಉದ್ಘಾಟಿಸಿದರು.
ಡೆಕ್ಕನ್ ಹೆರಾಲ್ಡ್ ಉಪ ಸಂಪಾದಕ ಶಾಹಿನ್ ಮೊಕಾಶಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಮಹ್ಮದ್ ಮುಕ್ತಾರೋದ್ದೀನ್, ಭವಾನಿಸಿಂಗ್ ಠಾಕೂರ, ಸಂಗಮನಾಥ ರೇವತಗಾಂವ, ಶಿವರಂಜನ ಸತ್ಯಂಪೇಟೆ, ರಾಜು ಕೋಷ್ಠಿ, ರಾಜು ಉದನೂರ, ಅರುಣ ಕುಲಕರ್ಣಿ, ಶಿವಶರಣ ಬೇಣ್ಣೂರ, ಅಂಜದ ಅಲಿ, ತಾಜುದ್ದೀನ ಆಜಾದ್, ಸುನೀಲ ಉದನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.