ಕಾಳಗಿ: ವೆಂಕಟೇಶ್ವರ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ

0
27

ಕಲಬುರಗಿ: ಸಂತ ಶರಣ ಯತಿ ಶ್ರೇಷ್ಠ ನಾಡಿನ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಸೂಗುರು(ಕೆ) ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ದಿ.೧೯ ಶುಕ್ರವಾರ ರಾತ್ರಿ ೧೨ ಗಂಟೆಗೆ ಅದ್ಧೂರಿಯಾಗಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುವುದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಕೃಷ್ಣನ ದರ್ಶಾನಾರ್ಶೀವಾದ ಪಡೆದು ಪುನೀತರಾಗಬೇಕು ಎಂದು ವೆಂಕಟೇಶ್ವರ ದೇವಸ್ಥಾನದ ಪ್ರದಾನ ಅರ್ಚಕ ಸನ್ನತದಾಸ ಮಹಾರಾಜರು ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವು ಕೂಡಾ ವಿಜೃಂಬಣೆಯಿಂದ ಕೃಷ್ಣ ಜನ್ಮಷ್ಟಮಿ ಆಚರಿಸಲಾಗುತ್ತಿದೆ, ಶುಕ್ರವಾರದಂದು ಬೆಳಿಗ್ಗೆ ಮಹಾಭಿಷೇಕ ಜರುಗುವುದು, ವಿಶೇಷ ಪೂಜಾ ವಿಧಿ- ವಿಧಾನಗಳು ಜರುಗುವವು, ಹಲವಾರು ಭಕ್ಷ್ಯಗಳನ್ನು ಅರ್ಪಿಸಲಾಗುವುದು ರಾತ್ರಿ ೧೨ ಗಂಟೆಗೆ ರೋಹಿಣಿ ನಕ್ಷತ್ರ ಅಷ್ಟಮಿ ತಿಥಿ ಯಲ್ಲಿ ಭಕ್ತ ಸಮೂಹ ಮಧ್ಯೆ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು, ನಂತರ ಭಕ್ತರಿಗೆ ಪ್ರಸಾಸ ವ್ಯವಸ್ಥೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here