ಸ್ವರ್ಣ ಸಿನಿಮಾದಲ್ಲಿ ಶೇಕಡ ೭೦ರಷ್ಟು ಕಲಾವಿದರು ಕಲಬುರಗಿಯವರೇ; ಅಭಯಹಸ್ತ

0
26

ಕಲಬುರಗಿ: ನಗರದ ಕನ್ನಡ ಭವನದಲ್ಲಿ ರಂಗಾಂತರಂಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ೭೫ನೇ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ಭರತನಾಟ್ಯ, ಜಾನಪದ ಸಂಗೀತ, ಸುಗಮ ಸಂಗೀತ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸ್ವರ್ಣ ಸಿನಿಮಾದ ಸಾಹಿತಿ ಅಭಯಹಸ್ತ ಮಾತನಾಡಿ ಕಲಬುರಗಿ ಕಲಾವಿದರು ಯಾವುದರಲ್ಲಿ ಕಮ್ಮಿ ಇಲ್ಲ ರಂಗಭೂಮಿ ನಾಟಕ ಧಾರವಾಹಿ ಸಿನಿಮಾಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಕಲಬುರಗಿಯವರು ನಿರ್ಮಾಣ ಮಾಡಿರುವ ಸ್ವರ್ಣ ಸಿನಿಮಾದಲ್ಲಿ ಶೇಕಡ ೭೦ರಷ್ಟು ಜನ ಕಲಾವಿದರು ಕಲಬುರಗಿಯವರೇ ಎಂಬುದು ಸಂತೋಷದ ವಿಷಯ ಈ ಸಿನಿಮಾದ ಒಂದು ಹಾಡಿಗೆ ಸಾಹಿತ್ಯ ಬರೆಯೊಕೆ ನನಗೆ ಅವಕಾಶ ಕೊಟ್ಟ ಯಲೀಷ್ ಸಿಂಹ ಅವರಿಗೆ ಧನ್ಯವಾದ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶರಣಪ್ಪ ಸುಗುರ್, ಸಚಿನ ಪರಹತಾಬಾದ, ಭಿಮರಾಯ ನಗನೂರ, ಪಿರಪ್ಪ ರೇವನೂರ, ಭಾರತಿ ಗುತ್ತೇದಾರ, ಎಂ.ಬಿ ನಿಂಗಪ್ಪ, ಪ್ರಕಾಶ ತಳಕೇರಿ, ಸಾಗರ ಜಾಧವ, ಮೋಹನ ಸಾಗರ, ಪ್ರಕಾಶ ವಗ್ಗೆ, ಮಮತಾ, ಯಲೀಷ್ ಸಿಂಹ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here