ಭಾರತ ಕಿರೀಟ ವಿಶ್ವಮಟ್ಟದಲ್ಲಿ ಎತ್ತಿಹಿಡಿದ ದೇಶಪ್ರೇಮಿ ಧ್ಯಾನಚಂದ

0
89

ಶಹಾಬಾದ:ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಮಿಂಚಿನ ಆಟ ನೋಡಿದ ಹಿಟ್ಲರ್ ತಮ್ಮ ದೇಶಕ್ಕೆ ಬರುವಂತೆ ಹಲವು ಆಮಿಷಗಳನ್ನು ಒಡ್ಡಿದರೂ ಅದನ್ನು ತಿರಸ್ಕರಿಸಿ ಭಾರತ ಕಿರೀಟವನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದ ದೇಶಪ್ರೇಮಿ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಹೇಳಿದರು.

ಅವರು ಸೋಮವಾರ ನಗರದ ಭಂಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಕ್ರೀಡೆಗಳಲ್ಲಿ ಅತಿ ಹೆಚ್ಚಿನ ಆಸಕ್ತಿ ಹೊಂದಿದ ಧ್ಯಾನ್‌ಚಂದ್ ಭಾರತೀಯ ಸೈನ್ಯದಲ್ಲಿ ಒಳ್ಳೆಯ ಹಾಕಿ ಆಡುವ ಶೈಲಿಯನ್ನು ಗಮನಿಸಿ ಅವರನ್ನು ಭಾರತೀಯ ಹಾಕಿ ತಂಡಕ್ಕೆ ಆಯ್ಕೆ ಮಾಡಿಕೊಂಡರು. ನೆದರ್‌ಲ್ಯಾಂಡ, ಅಮೇರಿಕಾ ಹಾಗೂ ಜರ್ಮನಿಯಲ್ಲಿ ನಡೆದ ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಗೋಲ್ಡ್ ಮೆಡಲ್‌ಗಳನ್ನು ತಂದು ಕೊಡುವುದರಲ್ಲಿ ಮುಖ್ಯ ಪಾತ್ರವಹಿಸಿದ್ದರು. ಅದರಲ್ಲೂ ಜರ್ಮನಿಯ ಬರ್ಲಿನ್‌ನಲ್ಲಿ ಭಾರತ ಹಾಗೂ ಜರ್ಮನಿಯ ನಡುವೆ ನಡೆದ ಹಣಾಹಣಿಯಲ್ಲಿ ಭಾರತ ೮-೧ ಅಂತರದಿಂದ ಗೆದ್ದು ಚಿನ್ನದ ಪದಕ ಗೆದ್ದತ್ತಿ ಅದರಲ್ಲಿ ೬ ಗೋಲುಗಳು ಧ್ಯಾನ್‌ಚಂದ್ ಅವರದಾಗಿತ್ತು.ಇವರ ಆಟದ ವೈಖರಿ, ಶೈಲಿಯನ್ನು ಕಂಡ ಹಿಟ್ಲರ್ ಅವರನ್ನು ಕರೆಯಿಸಿ ನೀವು ಜರ್ಮನಿಗೆ ಬಂದು ಬಿಡಿ ನಿಮ್ಮನ್ನು ನಮ್ಮ ಸೇನೆಯ ಸರ್ವೋಚ್ಚ ನಾಯಕ ಮಾಡುತ್ತೆನೆ ಎಂದು ಹೇಳಿದಾಗ ಭಾರತ ನನ್ನ ದೇಶ,ಅಲ್ಲಿ ನಾನು ಚೆನ್ನಾಗಿದ್ದೆನೆ ಎಂದು ಅಪ್ಪಟ ದೇಶಪ್ರೇಮಿಯಾಗಿ ಹೊರಹೊಮ್ಮಿದ ಅಪ್ರತಿಮ ಆಟಗಾರ ಮೇಜರ್ ಧ್ಯಾನ್‌ಚಂದ್ ಎಂದು ಹೇಳಿದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಕೋಶಾಧ್ಯಕ್ಷ ವಿಷ್ಣುತೀರ್ಥ ಆಲೂರ ಮಾತನಾಡಿ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್‌ರ ಜನ್ಮದಿನವಾದ ಆಗಸ್ಟ್ ೨೯ನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೆವೆ.ವರಂತೆ ಕ್ರೀಡೆಯಲ್ಲಿ ಆಸಕ್ತಿವುಳ್ಳವರು ಸರಿಯಾದ ಅಭ್ಯಾಸ ಮಾಡುವುದ ಮೂಲಕ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಹೇಳಿದರು.

ಶಾಲೆಯ ಮುಖ್ಯಗುರುಗಳಾದ ಶಂಕರ ಜಾಧವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿಕ್ಷಕ ಎಮ್.ಡಿ.ಜಕಾತೆ, ದತ್ತಪ್ಪ ಕೊಟನೂರ್, ಶಾಂತಮಲ್ಲ ಶಿವಭೋ,ಅನೀಲಕುಮಾರ,ಸಯ್ಯದ್ ಯುನೂಸ್, ಅನೀತಾ ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here