ಕಲಬುರಗಿ: ಆರೋಗ್ಯ ತಪಾಸಣಾ ಶಿಬಿರ

0
175

ಕಲಬುರಗಿ: ಜಿಲ್ಲಾ ವೀರಶೈವ ಬಣಗಾರ (ನಾಗಲೀಕ)ಸಮಾಜ, ಶ್ರೀ ಜಡೆ ಶಂಕರಲಿಂಗ ಸೇವಾ ಸಮಿತಿಯು ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಡಿಎಚ್‌ಓ ಡಾ.ರಾಜಶೇಖರ ಮಾಲಿ, ಜಿಮ್ಸ್ ಸಿಎಂಓ ಡಾ.ರವೀಂದ್ರ ನಾಗಲೀಕರ್ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Contact Your\'s Advertisement; 9902492681

ಮಹಾನಗರ ಪಾಲಿಕೆ ಸದಸ್ಯ ವಿಜಯಕುಮಾರ ಸೇವಲಾನಿ, ಶರಣು ಪಪ್ಪಾ, ಜಿಲ್ಲಾ ಬಣಗಾರ ಸಮಾಜದ ಅಧ್ಯಕ್ಷ ಘಾಳೆಪ್ಪ ದೊಡ್ಡಮನಿ, ಶ್ರೀ ಜಡೆ ಶಂಕರಲಿಂಗ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರಶೇಖರ ಧನಶೆಟ್ಟಿ, ಆನಂದ ದಂಡೋತಿ, ರವಿ ಕಲ್ಯಾಣಿ ಸೇರಿದಂತೆ ಮೊದಲಾದವರು ಇದ್ದರು. ಪ್ರಭುಲಿಂಗ ಕಲ್ಯಾಣಿ ವಂದಿಸಿದರು.

ಶಿಬಿರದಲ್ಲಿ ಡಾ.ಅನೀಲಕುಮಾರ ಬಣಗಾರ, ಡಾ.ಆನಂದ ನಾಗಲೀಕರ್, ಡಾ.ರಶ್ಮೀ ನಾಗಲೀಕರ್, ಡಾ.ಅಲೋಕ ಸಿ.ಪಾಟೀಲ್, ಡಾ.ವಿಜಯಕುಮಾರ ಪಾಟೀಲ್, ಡಾ.ಗಿರೀಶ ರೋಣದ, ಡಾ.ರವೀಂದ್ರ ಕುರ್ಲೆ, ಡಾ.ವಿಶಾಲ ವಿ.ಹುಡಗಿ, ಡಾ ಸಂಧ್ಯಾ ವಿಶಾಲ ಹುಡಗಿ, ಡಾ.ಪ್ರವೀಣ ಜಿ.ಶಿವಪುಜಿ, ಡಾ.ನಿಕಿತಾ ಅಮೋದ ಕಲ್ಯಾಣಿ ಅವರು ಪಾಲ್ಗೊಂಡು, ಬಿ.ಪಿ., ಶುಗರ್, ಮೊಳಕಾಲು ನೋವು, ಹಲ್ಲು ನೋವು, ಕಣ್ಣಿನ ತಪಾಸಣೆ, ಎಲುಬು, ಕೀಲು ನೋವು ಸೇರಿದಂತೆ ಇನ್ನಿತರ ರೋಗಗಳ ಬಗ್ಗೆ ತಪಾಸಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here