ಶಹಾಬಾದನಲ್ಲಿ ಗಾಯಕಿ ಎಮ್.ಡಿ.ಪಲ್ಲವಿ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ

0
225

ಶಹಾಬಾದ: ನಗರದ  ಲಕ್ಷ್ಮಿ ಗಂಜ್ ತರುಣ ಸಂಘ ಹಾಗೂ ಅಡತ್ ಹಾಗೂ ದಾಲಮಿಲ್ ಸಂಘದ ವತಿಯಿಂದ ೩೭ ನೇ ಗಣೇಶ ಉತ್ಸವ ಅಂಗವಾಗಿ ಸೆಪ್ಟೆಂಬರ್ ೭ ರಂದು ಗಂಗಮ್ಮ ಶಾಲೆಯ ಆವರಣದಲ್ಲಿ ಸಂಜೆ ೬ ಗಂಟೆಗೆ ಕರ್ನಾಟಕ ರಾಜ್ಯದ ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಎಮ್.ಡಿ.ಪಲ್ಲವಿ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಲಕ್ಷ್ಮಿ ಗಂಜ್ ತರುಣ ಸಂಘ ಹಾಗೂ ಅಡತ್ ಹಾಗೂ ದಾಲಮಿಲ್ ಸಂಘದ ಅಧ್ಯಕ್ಷ ಶಿವಕುಮಾರ ಇಂಗಿನಶೆಟ್ಟಿ ತಿಳಿಸಿದರು.

ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈಗಾಗಲೇ ಬಹಳ ವರ್ಷಗಳಿಂದ ಲಕ್ಷ್ಮಿ ಗಂಜ್ ತರುಣ ಸಂಘ ಪ್ರತಿವರ್ಷ ಒಂದಿಲ್ಲೊಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದೆ.ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಗಳನ್ನು ಸಲ್ಲಿಸುವುದರ ಜತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿದೆ.ಕೊರೊನಾ ಹಾವಳಿಯಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ.ಹಾಗಾಗಿ ಈ ಬಾರಿ ಸಂಗೀತದ ಮೂಲಕ ಸಾರ್ವಜನಿಕರಿಗೆ ಒಂದಿಷ್ಟು ಉಲ್ಲಾಸ, ಮನಸ್ಸಿಗೆ ಮುದ ನೀಡುವಂಥ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವೆ.ಅದಕ್ಕಾಗಿ ನಾಡಿನ ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಹಾಗೂ ನಟನೆಯಲ್ಲೂ ಸೈ ಎನಿಸಿಕೊಂಡ ಎಮ್.ಡಿ.ಪಲ್ಲವಿ ಹಾಗೂ ಅವರ ತಂಡವನ್ನು ಆಹ್ವಾನಿಸಿದ್ದೆವೆ.

Contact Your\'s Advertisement; 9902492681

ಈ ಸಂಗೀತ ಸಂಜೆ ಕಾರ್ಯಕ್ರಮವನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸಲಿದ್ದಾರೆ. ಮುಗುಳನಾಗಾವಿಯ ಕಟ್ಟಿಮನಿ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಬುರಗಿ ಜಿಲ್ಲಾ ಎಸ್‌ಪಿ ಇಶಾ ಪಂತ್, ತಾಲೂಕಾ ತಹಸೀಲ್ದಾರ ಸುರೇಶ ವರ್ಮಾ,ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ, ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಅಧ್ಯಕ್ಷರಾದ ಹಣಮಂತರಾವ ಇಂಗಿನಶೆಟ್ಟಿ, ಕಾರ್ಯದರ್ಶಿ ಭೀಮಾಶಂಕರ ಮುಟ್ಟತ್ತಿ, ಜಿಪಂ ಮಾಜಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ,ಕಸಾಪ ತಾಲೂಕಾ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಉದ್ದಿಮೆದಾರ ನರೇಂದ್ರ ವರ್ಮಾ, ಲಕ್ಷ್ಮಿ ಗಂಜ್ ತರುಣ ಸಂಘದ ಅಧ್ಯಕ್ಷ ಶಿವುಮಾರ ಇಂಗಿನಶೆಟ್ಟಿ ಆಗಮಿಸಲಿದ್ದಾರೆ.ಈ ಕಾರ್ಯಕ್ರಮಕ್ಕೆ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಗಣ್ಯರಾದ ಅಣವೀರ ಇಂಗಿನಶೆಟ್ಟಿ, ಭೀಮರಾವ ಮೇಟಿ,ಬಾಬುರಾವ ಪಂಚಾಳ, ಪ್ರಶಾಂತ ಮರಗೋಳ, ವಿಶ್ವರಾಧ್ಯ ಬಿರಾಳ, ಅಪ್ಪು ನಾಗಶೆಟ್ಟಿ,ಸೋಮು ಪಾಟೀಲ ನರಿಬೋಳ, ಗುರುಪ್ರಸಾದ ಕೋಬಾಳ,ಜಗು ಪೂಜಾರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here