ಡಾ. ದಾಕ್ಷಾಯಿಣಿ ಅವ್ವಾಜಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ

0
117

ಕಲಬುರಗಿ: ನಗರದ ಶರಣಬಸವ ಶೈಕ್ಷಣಿಕ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ಪೂಜ್ಯಡಾ.ಶರಣಬಸವಪ್ಪಅಪ್ಪಾಜಿಯವರ ಬೆನ್ನೆಲುಬಾಗಿ ನಿಂತು, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕಕ್ಷೇತ್ರದಲ್ಲಿ ಸಾಧನೆತೋರಿದ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾ ಅವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ತಿಳಿಸಿದರು.

ಕಳೆದ ಒಂದುಎಂಟು ದಿನಗಳಿಂದ ಮಠದಲ್ಲಿ ೭೫ನೇ ಸ್ವಾತಂತ್ರಅಮೃತ ಮಹೋತ್ಸವ, ಗುರುಗಳ ಪುಣ್ಯಸ್ಮರಣೆ, ಜಗದ್ಗುರುಗಳ ಜನ್ಮ ದಿನಾಚರಣೆ ಹಾಗೂ ಶರಣದರ್ಶನ-ಪ್ರವಚನ ಜರುಗಿದ ಕಾರ್ಯಕ್ರಮದಲ್ಲಿ ಮುಂಡರಗಿ-ಬೈಲೂರು ಮಠದ ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ಪ್ರವಚನಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು, ರೈತರು, ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.

Contact Your\'s Advertisement; 9902492681

ಡಾ.ದಾಕ್ಷಾಯಿಣಿಅವ್ವಾಅವರ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕಕ್ಷೇತ್ರದಲ್ಲಿ ಸಾಧನೆತೋರಿದ್ದರಿಂದ ೧೩ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಅವರಿಗೆ ಈ ಕಲ್ಯಾಣಕರ್ನಾಟಕ ರತ್ನ ಪ್ರಶಸ್ತಿ ಜೊತೆಗೆ ಬಂಗಾರದ ಪದಕ ನೀಡಿಗೌರವಿಸಲಾಗುವುದು ಎಂದು ತಿಳಿಸಿದರು. ಗುರು ಬಸವ ಮಠದ ಶಿವಾನಂದ ಸ್ವಾಮಿಗಳು, ಅಲ್ಲಮಪ್ರಭು ಪಾಟೀಲ್, ಶರಣಕುಮಾರ ಮೋದಿ ಸೇರಿದಂತೆಇತರರುಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here