ಕಲಬುರಗಿ : ಗುಲಬರ್ಗಾ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ಕ್ರೀಡಾಂಗಣದಲ್ಲಿ ಭಾರತ ಸೌಟ್ಸ್ ಮತ್ತು ಗೈಡ್ ಕರ್ನಾಟಕ ಜಿಲ್ಲಾ ಸಂಸ್ಥೆ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಇವರ ಸಹಯೋಗದೋಂದಿಗೆ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾ.ಸ್ಕೌ.ಗೈನ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯ ಅವರು ಮಾತನಾಡಿದರು.
ಉಪ ಕುಲಪತಿ ಪ್ರೋ.ದಯಾನಂದ ಅಗಸರ್, ಕುಲ ಸಚಿವ ಪ್ರೋ.ವ್ಹಿ.ಜಿ.ಕಾಂಬಳೆ, ಡಾ.ಎನ್.ಜಿ.ಕಣ್ಣೂರ, ಡಾ.ಎಂ.ಎಸ್.ಪಾಸೋಡಿ, ಡಾ.ಹೆಚ್.ಎಸ್. ಜಂಗೆ, ಸಕ್ರಪ್ಪಗೌಡ ಬಿರಾದಾರ, ಮಲ್ಲೇಶ್ವರಿ ಜುಜಾರೆ, ಭಾರತ ಸೌಟ್ ಮತ್ತು ಗೈಡ್ ಕರ್ನಾಟಕ ಜಿಲ್ಲಾ ಆಯುಕ್ತರಾದ ಎಸ್.ಪಿ.ಎಸ್. ಸುಳ್ಳದ್, ಸುಜಾತಾ ಇ. ಮುಲ್ಲಾ, ಜಿಲ್ಲಾ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ, ಜಿಲ್ಲಾ ಖಜಾಂಚಿ ಆಯ್ಯಪ್ಪ ಅಂಬರಖೇಡ, ಅಮರೇಶ ಕೋರಿ, ಪೀರಪ್ಪ, ಹೂಗೊಂಡ, ಸುಮಂಗಲಾ ಕೋರಿ ಹಾಗೂ ಸಂಸ್ಥೆ ಪದಾಧಿಕಾರಿಗಳು ಇದ್ದರು.