ಪತ್ರಕರ್ತ ಅನೀಲ್ ದೇಶಪಾಂಡೆಗೆ ಪತ್ರಕರ್ತರ ಸಂಘ ಶ್ರದ್ಧಾಂಜಲಿ

0
8

ಸುರಪುರ:ಇತ್ತೀಚೆಗೆ ನಿಧನರಾದ ಯಾದಗಿರಿಯ ಹಿರಿಯ ಪತ್ರಕರ್ತ ಅನೀಲ್ ದೇಶಪಾಂಡೆಯವರಿಗೆ ಇಲ್ಲಿಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅನೇಕ ಪತ್ರಕರ್ತರು ಮಾತನಾಡಿ,ಅನೀಲ್ ದೇಶಪಾಂಡೆಯವರು ಒಬ್ಬ ಸೃಜನಶೀಲ ಪತ್ರಕರ್ತರಾಗಿ ಸುಮಾರು ಮೂರು ದಶಕಗಳ ಕಾಲ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.ಇಂದು ಅವರ ಅಕಾಲಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.ಜಿಲ್ಲೆಯ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಅವರು ನಾಡಿನ ಅನೇಕ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ,ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಕ್ಕೀಡಾಗಿದ್ದರು ಕೂಡ ಪತ್ರಿಕಾ ಸೇವೆಯನ್ನು ನಿಲ್ಲಿಸಿರಲಿಲ್ಲ,ಇಂದು ಅವರ ನಿಧನದಿಂದಾಗಿ ಪತ್ರಿಕಾ ರಂಗಕ್ಕೆ ನಷ್ಟುವುಂಟಾಗಿದ್ದಲ್ಲದೆ ಕುಟುಂಬಕ್ಕೂ ತೀವ್ರ ತೊಂದರೆಯಾಗಿದೆ.ಆದ್ದರಿಂದ ಸರಕಾರ ಕೂಡಲೇ ಅನೀಲ್ ದೇಶಪಾಂಡೆಯವರ ಕುಟುಂಬಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.

Contact Your\'s Advertisement; 9902492681

ಸಭೆಯಲ್ಲಿ ಆರಂಭದಲ್ಲಿ ಅನೀಲ್ ದೇಶಪಾಂಡೆಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಗಿರೀಶ ಶಾಬಾದಿ,ಅಧ್ಯಕ್ಷ ಸಿದ್ದಯ್ಯ ಪಾಟೀಲ್,ಹಿರಿಯ ಪತ್ರಕರ್ತ ಅಶೋಕ ಸಾಲವಾಡಗಿ,ರಾಜು ಕುಂಬಾರ,ಹೊನ್ನಪ್ಪ ತೇಲ್ಕರ್,ಕಲೀಂ ಫರೀದಿ,ಮಹಾದೇವಪ್ಪ ಬೊಮ್ಮನಹಳ್ಳಿ,ಮಲ್ಲಿಕಾರ್ಜುನ ತಳ್ಳಳ್ಳಿ,ಶ್ರೀಮಂತ ಚಲುವಾದಿ,ಮಲ್ಲು ಬಾದ್ಯಾಪುರ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here