ತರನಳ್ಳಿ ಶಾಲೆಯ ಎಸ್‍ಡಿಎಂಸಿ ಪದಾಧಿಕಾರಿಗಳ ಆಯ್ಕೆ

0
49

ಶಹಾಬಾದ:ತಾಲೂಕಿನ ತರನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‍ಡಿಎಂಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ಹಿಂದಿನ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಧಿ ಪೂರ್ಣವಾದ ಹಿನ್ನೆಲೆಯಲ್ಲಿ ನೂತನ ಎಸ್‍ಡಿಎಂಸಿ ಪದಾಧಿಕಾರಿಗಳ ಆಯ್ಕೆ ಸಭೆ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Contact Your\'s Advertisement; 9902492681

ಮಮತಾ ಶಿವಮೂರ್ತಿ ನಾಲವಾರಕರ –ಅಧ್ಯಕ್ಷೆ, ಚನ್ನಪ್ಪ ಕುಂಬಾರ-ಉಪಾಧ್ಯಕ್ಷ ಹಾಗೂ ಸದಸ್ಯರಾಗಿ ಅಂಬಿಕಾ ಬಂಡೇರ, ದಂಡೇಪ್ಪಾ ಮಾಡಗಿ, ಸಾಯಿಬಾಬಾ, ಸಂಗೀತಾ ರಾಠೋಡ,ಮಲ್ಲಯ್ಯ ಸ್ವಾಮಿ, ವಿಜಯಲಕ್ಷ್ಮಿ, ನಾಗಪ್ಪ ವಿಠ್ಠಲ, ಭಾವನಾ ವಿಜಯ, ಲಕ್ಷ್ಮಿ ಬಸವರಾಜ, ಶಿವಕುಮಾರ, ದಾವೂದ ಅಲಿ, ರಹೇಮಾನ ಸಾಬ, ನೂರಜಾ ಬೇಗಂ, ಮದರ ಶಾ, ರಾಜಶೇಖರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ, ಸಿಆರ್‍ಪಿ ಶರಣಬಸಪ್ಪ ಪಾಟೀಲ, ಇಸಿಓ ಶ್ರೀಧರ ರಾಠೋಡ, ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಶಫಿಯಾ ಬೇಗಂ, ಶಿಕ್ಷಕರು ಹಾಗೂ ಶಾಲೆಯ ಮಕ್ಕಳ ಪಾಲಕರು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here