ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿ ನೇಮಕ

0
174

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಶರಣಕುಮಾರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಶರಣು ಮೋತಕಪಲ್ಲಿ ಹಾಗೂ ಚಿಂಚೋಳಿ ತಾಲೂಕಿನ ಮಹಾಸಭಾದ ಯುವ ಘಟಕದ ನೂತನ ಅಧ್ಯಕ್ಷರಾಗಿ ನಾಗರಾಜ ಮಲಕೂಡ ಅವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಅವರು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಾಸಭಾದ ಮುಖಂಡರಾದ ಸೋಮಶೇಖರ ಹಿರೇಮಠ, ಶೀಲಾ ಮುತ್ತಿನ, ಶರಣಬಸಪ್ಪ ತೆಂಗಳಿ, ಭೀಮಾಶಂಕರ ಮೀಟೇಕರ, ಜೆ ಕೆ ಪಾಟೀಲ್, ಬಸವರಾಜ ಪಾಟೀಲ, ಮಲ್ಲಿಕಾರ್ಜುನ ಡೋಳೆ, ಚಿಂಚೋಳಿ ತಾಲೂಕು ಘಟಕದ ಅಧ್ಯಕ್ಷ ಚಿತ್ರಶೇಖರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಲಾಮೂರ್, ಸಮಾಜದ ಮುಖಂಡರಾದ ದೀಪಕನಾಗ ಪುಣ್ಯಶೆಟ್ಟಿ, ಶಾಂತವೀರ ಸುಂಕದ, ಸಂಗಪ್ಪ ಪಾಲಾಮೂರ್, ಶರಣಪ್ಪ ಹಲಚೇರಿ, ಶಶಿಧರ ಸೂಗೂರು, ಸಂತೋಷ ಗಡಂತಿ, ರಾಜಶೇಖರ ಮಜ್ಜಗಿ, ಶಶಿಧರ ಯಾಲಾಲ, ಉಮಾ ಪಾಟೀಲ, ಜಗನ್ನಾಥ ಶೇರಿಕಾರ, ಅಲ್ಲಮಪ್ರಭು ಹುಲಿ, ಶರಣು ಪಾಟೀಲ, ಸಂತೋಷ ಗಡಂತಿ, ಮಲ್ಲಿಕಾರ್ಜುನ ಅಲ್ಲಾಪೂರ, ಮಲ್ಲಿಕಾರ್ಜುನ ಯಾಲಾಲ್ ಸಚ್ಚಿದಾನಂದ ಸುಂಕದ, ವೀರಶೆಟ್ಟಿ ಪಾಟೀಲ ಸೇರಿದಂತೆ ಸಮಾಜದ ಮುಖಂಡರು, ಯುವಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here