ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು, ಆನೇಕಲ್ ಘಟಕ, ಪ್ರಜಾತಾರೆ ಬಳಗ, ಗಂಧದನಾಡು ಜನಪರ ವೇದಿಕೆ ಹಾಗೂ ಕೌದಿ ಪ್ರಕಾಶನ ಜಂಟಿಯಾಗಿ ಕಥಾ ಸಮಯ ವಾರ್ಷಿಕ ಕಥಾ ಸ್ಪರ್ಧೆ ಆಯೋಜಿಸಿದೆ.
ಮೊದಲ ಮೂರು ಅತ್ಯುತ್ತಮ ಕತೆಗೆ ತಲಾ 10,000/- ಸಾವಿರ ಬಹುಮಾನ ನೀಡಲಾಗುತ್ತದೆ ಹಾಗಗೂ ಆಯ್ಕೆಯಾದ 20 ಕತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಯಮಗಳು: ಪ್ರಪಂಚದ ಯಾವುದೇ ಭಾಗದಿಂದ 45 ವರ್ಷದೊಳಗಿನವರು ಮಾತ್ರ ಕತೆ ಕಳಿಸಬಹುದು, ಸ್ಪರ್ಧೆಗೆ ಕಳಿಸುವ ಕತೆ ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು, ಬಹುಮಾನಿತ ಕತೆಗಳು ಸೇರಿದಂತೆ ಮೊದಲ 20 ಕತೆಗಳ ಯಾವುದೇ ಮಾಧ್ಯಮದಲ್ಲಿ ಪ್ರಕಟಿಸುವ ಹಕ್ಕು ಸ್ಪರ್ಧೆಯ ಅಯೋಜಕರದಾಗಿರುತ್ತದೆ, ಕತೆ ನುಡಿ ತಂತ್ರಾಂಶದಲ್ಲಿ ಇರಬೇಕು, ಕಥೆಗೆ ಪದಗಳ ಮಿತಿ ಇಲ್ಲ, ಸ್ಪರ್ಧೆಗೆ ಕಳಿಸುವ ಕತೆಗಳ ಜೊತೆಗೆ ಪ್ರತ್ಯೇಕ ಪುಟದಲ್ಲಿ ನಿಮ್ಮ ಭಾವಚಿತ್ರದೊಂದಿಗೆ ಪರಿಚಯ ಕತೆಗಳು ನಮಗೆ ತಲುಪಲು ಕಡೆಯ ದಿನಾಂಕ 1 ನವೆಂಬರ್ 2022. anekalkathasparde@gmail.com ಗೆ ಕಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕ.ಸಾ.ಪ ಆನೇಕಲ್ ಘಟಕ 7795212012, ಪ್ರಜಾತಾರೆ ಬಳಗ 7204761668, ಕೌದಿ ಪ್ರಕಾಶನ 9380697082, ಗಂಧದನಾಡು ಜನಪರ ವೇದಿಕೆ 9880460306 ಗೆ ಸಂಪರ್ಕಿಸಬಹುದು.