Saturday, July 13, 2024
ಮನೆಬಿಸಿ ಬಿಸಿ ಸುದ್ದಿನಾಳೆ ಸನ್ಮಾನ ಸಮಾರಂಭ

ನಾಳೆ ಸನ್ಮಾನ ಸಮಾರಂಭ

ಕಲಬುರಗಿ: ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ವತಿಯಿಂದ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ಕಸ್ತೂರಿಬಾಯಿ ಪಿ.ಬುಳ್ಳಾ ಸಾಂಸ್ಕøತಿಕ ಸಭಾ ಭವನದಲ್ಲಿ ಭಾನುವಾರ ಬೆಳಿಗ್ಗೆ 11-ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ನೌಕರ ಬಾಂಧವರಿಗೆ ಸನ್ಮಾನ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕರು, ಹಿರಿಯ ಸಾಹಿತಿಗಳು ಹಾಗೂ ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ಮಾಜಿ ಸದಸ್ಯರಾದ ಡಾ.ನಾಗಬಾಯಿ.ಬಿ.ಬುಳ್ಳಾ. ಅವರು ಉದ್ಘಾಟಿಸುವರು.

ನಿವೃತ್ತ ಅಬಕಾರಿ ಅಧೀಕ್ಷಕ ಶರಣಪ್ಪ ಕುಮಸಿ, ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಅಧ್ಯಕ್ಷ ನೀಲಕಂಠ ಎಂ ಜಮಾದಾರ, ಮೌಲ್ಯಮಾಪನ ಗುಲ್ಬರ್ಗಾ ವಿಶ್ವವಿದ್ಯಾಲಯ ಕುಲಸಚಿವ ಬಾ.ಮೇಧಾವನಿ.ಎಸ್.ಕಟ್ಟಿ, ಕಮಲಾಪುರ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ ಪಾಟೀಲ ಕೆ ಎ ಎಸ್, ವಾಣಿಜ್ಯ ತೆರಿಗೆ ಇಲಾಖೆ ಸಾಹಯಕ ಆಯುಕ್ತ ರಾಜಶೇಖರ ಕೋಲಾರ, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಪ್ರವಾಚಕ ಬಸಂತಬಾಯಿ ಅಕ್ಕಿ, ಸ..ಪ.ಪೂ.ಕಾಲೇಜು ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ನಾಮದೇವ ಕಡಕೊಳ ಇವರು ಮುಖ್ಯ ಅತಿಥಿಯಾಗಳಾಗಿ ಆಗಮಿಸುವರು.

ಅ.ಕ.ಸ್ನೇಹ ಗಂಗಾ ವಾಹಿನಿ ಉಪಾಧ್ಯಕ್ಷ ಪುಲಕೇಶಿ ಚೌದ್ರಿ ಗೌರವ ಉಪಸ್ಥಿತಿ ವಹಿಸುವರು, ಅ.ಕ.ಸ್ನೇಹ ಗಂಗಾ ವಾಹಿನಿ ಕಾರ್ಯಾಧ್ಯಕ್ಷ ಸೈಬಣ್ಣಾ ಕೆ ವಡಗೇರಿ ಅಧ್ಯಕ್ಷತೆ ವಹಿಸುವರು.

ಮಾರುತಿ ಹುಜರಾತಿ, ಸೋಮಶೇಖರ ಹಂಚಿನಾಳ, ರಶ್ಮೀ ಸಂತೋಷ ಮಟಗಾರ, ಕಾಶಿನಾಥ ಡಿ ಆಲೂರು, ಸಿಪಿಐ ಅಕ್ಕಮಹಾದೇವಿ, ಪ್ರಕಾಶ ನಾಯಿಕೋಡಿ, ವಿಜಯಲಕ್ಷ್ಮೀ ಕಂದಳ್ಳಿ, ಸಂತೋಷ ಬೆಳಗುಂಪಿ, ಡಾ.ಭೀಮರಾಯ ಅರಕೇರಿ, ಧರ್ಮರಾಜ ಜವಳಿ, ಸಿದ್ದಪ್ಪ ಮಹಾಗಾಂವ, ಚಂದ್ರಕಾಂತ ತಳವಾರ ಇತರರಿಗೆ ಸಮಾಜದ ನೌಕರರ ಬಾಂಧವರಿಗೆ ಸನ್ಮಾನಿಸುವರು. ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಸೈಬಣ್ಣಾ ವಡಗೇರಿ ಪ್ರಕಟಣೆಗೆ ತಿಳಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular