ಅಕ್ರಮ ಜಾನುವಾರು ಸಾಗಾಟ ಆರೋಪ: ಕಾರ್ಯಕರ್ತರಿಂದ ವಾಹನ ಪೊಲೀಸ್ ವಶಕ್ಕೆ

0
16

ಸುರಪುರ: ನಗರದಲ್ಲಿ ಅಕ್ರಮ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿದೆ ಎನ್ನುವ ಆರೋಪದ ಮೇಲೆ ಬಜರಂಗದಳದ ಕಾರ್ಯಕರ್ತರು ಜಾನುವಾರುಗಳಿದ್ದ ವಾಹನವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಗರದ ಕಬಾಡಗೇರಾದ ಬಳಿಯಲ್ಲಿ ವಾಹನದಲ್ಲಿ 3 ಎತ್ತುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು ಎಂದು ಆರೋಪಿಸಿರುವ ಬಜರಂಗದಳದ ಮುಖಂಡರು ವಾಹನವನ್ನು ನಿಲ್ಲಿಸಿದರೆ ನಮ್ಮ ಮೇಲೆಯೇ ದರ್ಪ ತೋರಿಸುತ್ತಾರೆ ಎಂದು ಆರೋಪಿಸಿದ್ದಾರೆ.ಅಲ್ಲದೆ ಪೊಲೀಸರಿಗೆ ಮಾಹಿತಿ ನೀಡಿ ನಂತರ ಸ್ಥಳಕ್ಕಾಗಿಮಿಸಿದ ಪೊಲೀಸರಿಗೆ ವಾಹನ ಸಮೇತ ಒಪ್ಪಿಸಿದ್ದಾರೆ.

Contact Your\'s Advertisement; 9902492681

ಘಟನೆಯ ಕುರಿತು ಮಾಹಿತಿ ನೀಡಿರುವ ಪಿಐ ಸುನೀಲಕುಮಾರ ಮೂಲಿಮನಿ, ಈಗಾಲೇ ದೂರು ದಾಖಲಿಸಿಕೊಂಡಿದ್ದು ವಾಹನ ಯಾರಿಗೆ ಸೇರಿದ್ದು ಹಾಗೂ ಜಾನುವಾರುಗಳ ಸಾಗಾಟ ಅಕ್ರಮ ಎನ್ನುವುದರ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here