ಸುರಪುರ: ದೀಪಾವಳಿ ಹಬ್ಬ ಆಚರಣೆ ಅಂಗವಾಗಿ ನಗರದ ಎಲ್ಲೆಡೆ ಗ್ರಾಹಕ ಖರೀದಿ ಜೋರಾಗಿ ಕಂಡುಬಂತು.ನಗರದ ಮಹಾತ್ಮ ಗಾಂಧಿ ವೃತ್ತ,ದರಬಾರ ರಸ್ತೆ,ಬಸ್ ನಿಲ್ದಾಣ ಸೇರಿ ಎಲ್ಲಾ ಕಡೆಗಳಲ್ಲಿ ಜನರು ಹಬ್ಬಕ್ಕಾಗಿ ಬೇಕಾದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.
ದೀಪಾವಳಿ ಆಚರಣೆ ಅಂಗವಾಗಿ ಮಣ್ಣಿನ ದೀಪಗಳ ಖರೀದಿ, ಅಂಗಡಿಗಳ ಪೂಜೆ,ಮನೆಗಳಲ್ಲಿ ಲಕ್ಷ್ಮೀ ಪೂಜೆಗಾಗಿ ಹೂ,ಹಣ್ಣು,ತೆಂಗಿನ ಗರಿಗಳ ಖರೀದಿ,ಅಂಗಡಿಗಳ ಅಲಂಕಾರಿಕ ವಸ್ತುಗಳ ಖರೀದಿಗೆ ಜನರು ಮುಂದಾಗಿದ್ದರು.ಅಲ್ಲದೆ ಕಿರಾಣಿ ಅಂಗಡಿಗಳು,ಬಟ್ಟೆ ಅಂಗಡಿಗಳಲ್ಲೂ ಜನ ತುಂಬಿದ್ದರು.ಆದರೆ ಖರೀದಿಗೆ ಮುಂದಾಗಿದ್ದ ಜನರು ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಅನೇಕ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದು ಕಂಡುಬಂತು.ಯಾವುದೇ ವಸ್ತು ಖರೀದಿ ಮಾಡಿದರು ಬೆಲೆ ಏರಿಕೆಯಿಂದಾಗಿ ತತ್ತರಿಸುವಂತಾಗಿದೆ ಎನ್ನುತ್ತಿರುವುದು ಕಂಡುಬಂತು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಹಬ್ಬದ ಆಚರಣೆಗೆ ತೊಡಕಾಗಿತ್ತು,ಈಗ ಕೊರೊನಾ ಕಳೆದಿದ್ದರಿಂದ ಜನರು ಹಬ್ಬದ ಆಚರಣೆಗೆ ಯಾವುದೇ ನಿರ್ಬಂಧ ಇಲ್ಲವಾದ್ದರಿಂದ ಜನರು ಸಂತೋಷದಿಂದ ಹಬ್ಬದ ಆಚರಣೆಗೆ ಮುಂದಾಗಿದ್ದು,ಎಲ್ಲೆಡೆ ಖರೀದಿಗೆ ಮುಂದಾಗಿದ್ದರು.