ಅಪ್ಪು ಅಭಿಮಾನಿಗಳು ಫುಲ್ ಖುಷ್

0
8

ಕಲಬುರಗಿ: ಪವರ್ ಸ್ಟಾರ್ಟ್, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ಅವರ ಕೊನೆಯ ಕನಸು ಬಹು ನಿರೀಕ್ಷಿತ ಗಂಧದಗುಡಿ ಚಿತ್ರ ಶುಕ್ರವಾರ ಪ್ರದರ್ಶನಗೊಂಡಿತು.

ನಗರದಲ್ಲಿ ಸಂಗಮ ಚಿತ್ರಮಂದಿರ, ಶೆಟ್ಟಿ ಚಿತ್ರಮಂದಿರ, ಐನಾಕ್ಸ್ ಹಾಗೂ ಮಿರಾಜ್ ಚಿತ್ರಮಂದಿರ ಎದುರುಗಡೆ ಪುನೀತ್ ಅಭಿಮಾನಿಗಳಿಂದ ಅಪ್ಪು ಕಟೌಟ್ ಗೆ ಕ್ಷೀರಾಭಿμÉೀಕ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Contact Your\'s Advertisement; 9902492681

ಚಿತ್ರ ಮೊದಲ ಶೋ ಆರಂಭಗೊಳ್ಳುವ ಮುನ್ನ ಚಿತ್ರಮಂದಿರ ಎದುರುಗಡೆ ಅಪ್ಪು ಅಪ್ಪು ಅಪ್ಪು ಎಂಬ ಹμÉರ್ೂೀದ್ಘಾರ ಅಭಿಮಾನಿಗಳು ಮೊಳಗಿಸಿದರು. ಗಂಧದಗುಡಿಗೆ ಜೈ, ಅಪ್ಪುಗೆ ಜೈ ಎನ್ನುವ ಮೂಲಕ ಅಪ್ಪುವಿನ ಕಡೆಯ ಚಿತ್ರವಾದ ಗಂಧದಗುಡಿಯನ್ನು ಅಭಿಮಾನಿಗಳು ವಿಜೃಂಭಿಸಿದರು.

ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಎಂಬ ಬೋರ್ಡ್ ನೇತು ಹಾಕಿರುವ ದೃಶ್ಯ ಕಂಡು ಬಂದವು. ಚಿತ್ರಮಂದಿರಗಳ ಎದುರು ವೀಕ್ಷಕರ ದಂಡೆ ಹರಿದು ಬಂದಿತ್ತು. ಚಿತ್ರ ವೀಕ್ಷಣೆ ಬಳಿಕ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಂಧದಗುಡಿ ಚಿತ್ರದಲ್ಲಿ ಅಪ್ಪು ಹಾಗೂ ಅಮೋಘವರ್ಷ ಅವರು ಕರುನಾಡಿನ ಒಡಲಾಳದ ಸೌಂದರ್ಯ, ವಿಸ್ಮಯ ಜಗತ್ತನ್ನೇ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎನ್ನುತ್ತಿದ್ದಾರೆ ಪ್ರೇಕ್ಷಕರು.

ಮೊದಲ ದಿನವೇ ಗಂಧದಗುಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಗಂಧದಗುಡಿಯ ಮೂಲಕ ಪುನೀತ್ ರಾಜಕುಮಾರ ಅವರು ನೆಲ, ಜಲ, ಕಾಡು, ಪ್ರಾಣಿ, ಪಕ್ಷಿಗಳ ಜೀವ ಸಂಕೋಲೆ ಉಳಿಸಬೇಕು ಎಂದು ಕರುನಾಡಿನ ಜನತೆಗೆ ಒಂದೊಳ್ಳೆ ಸಂದೇಶ ನೀಡಿದ್ದಾರೆ. ಅಭಿಮಾನಿಗಳು ತಿಳಿಸಿದರು.

ಗಂಧದಗುಡಿಯ ಮೂಲಕ ಪುನೀತ್ ರಾಜಕುಮಾರ ಅವರನ್ನು ಕೊನೆಯದಾಗಿ ತೆರೆಮೇಲೆ ನೋಡುವ ವಿಷಯವೇ ನೋವಿನ ಸಂಗತಿಯಾಗಿದೆ. ಚಿತ್ರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬಾರದು ಹಾಗೂ ಕಾಡನ್ನು ದೇವರ ರೂಪದಲ್ಲಿ ಕಾಣಬೇಕು ಎಂಬ ಸಂದೇಶ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. -ಪ್ರಮಥ ಎಸ್, ಅಪ್ಪು ಅಭಿಮಾನಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here