ಕಲಬುರಗಿ: ನಗರದ ಎಸ್.ವಿ.ಪಿ ವೃತ್ತದಲ್ಲಿ ಹೆಚ್.ಡಿ.ದೇವೇಗೌಡರ ಅಭಿಮಾನಿಗಳ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಸಾರ್ವಜನಿಕರಿಗೆ ಹಾಗೂ ಆಟೋ ಚಾಲಕರಿಗೆ ಧ್ವಜ ವಿತರಣಾ ಕಾರ್ಯಕ್ರಮವನ್ನು ಜೈ ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್.ಫರತಾಬಾದ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದೇವೇಂದ್ರ ಹಸನಾಪುರ್, ಮುಖಂಡರಾದ ಕಾಶಿನಾಥ ಮಾಳಗಿ, ಮಾರುತಿ ರಾಮನಹಳ್ಳಿ, ಯೆಸು ಎಡ್ಡಳ್ಳಿ, ಅಬ್ರಹ್ಮ ಬಿ.ಹೆಚ್, ಪ್ರವೀಣ ಬಾಡಿಹಾಳ, ಶರಣು ಮಂಗಲಗಿ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.