ಒಂದು ಲಕ್ಷ ಪುಷ್ಪ ಬಿಲ್ವಾ ಅರ್ಚನೆ, ಇಷ್ಟಲಿಂಗ ಪೂಜೆ, ಲಿಂಗ ದೀಕ್ಷೆ ಕಾರ್ಯಕ್ರಮ

0
135

ಕಲಬುರಗಿ: ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ಕಲ್ಬುರ್ಗಿ ಜಿಲ್ಲಾ ಸಮಿತಿ ವತಿಯಿಂದ ಶರಣಬಸವೇಶ್ವರ ಸಂಸ್ಥಾನದ ಒಂಬತ್ತನೇ ಪೀಠಾಧಿಪತಿಗಳಾದ ಪರಮಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಜನ್ಮದಿನದ ನಿಮಿತ್ಯ ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯದೈವರಾದ ಶರಣಬಸವೇಶ್ವರರ ಕರ್ತೃಗದ್ದುಗೆ ಒಂದು ಲಕ್ಷ ಪುಷ್ಪ ಬಿಲ್ವಾ ಅರ್ಚನೆ ಮತ್ತು ಇಷ್ಟಲಿಂಗ ಪೂಜೆ ಹಾಗೂ ಲಿಂಗ ದೀಕ್ಷೆ ಕಾರ್ಯಕ್ರಮವು ಷ.ಬ್ರ ಪರ್ವತೇಶ್ವರ ಶಿವಾಚಾರ್ಯ ಬೆಳಗುಂಪಿ ಮಠ  ಮತ್ತು ಷ ಬ್ರ ಗುರುಮೂರ್ತಿ ಶಿವಾಚಾರ್ಯರು ಪಾಳಾ ಮಠ ಮತ್ತು ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಪರಮ ಪೂಜ್ಯ ಡಾ. ಶರಣಬಸಪ್ಪ ಅಪ್ಪಾ  ಅಪ್ಪಾ ಹಾಗೂ ಮಾತೃಶ್ರೀ ದಾಕ್ಷಾಯಿಣಿ ಅವ್ವಾ ಅವರ ದಿವ್ಯ ಸಾನಿಧ್ಯದಲ್ಲಿ ನೇರವೇರಿತು.

ಈ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯ ಅಧ್ಯಕ್ಷರಾದ ಪ್ರಶಾಂತ ಕಲ್ಲೂರ ಮತ್ತು ಜಿಲ್ಲಾ ಅಧ್ಯಕ್ಷರಾದ  ದಯಾನಂದ ಪಾಟೀಲ್ ಮತ್ತು ರಾಜ್ಯ ಸಮಿತಿ ಸದಸ್ಯ ಶ್ರೀಧರ ನಾಗನಹಳ್ಳಿ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಕಲ್ಯಾಣರಾವ ಪಾಟೀಲ್ ಕಣ್ಣಿ,ಪ್ರಧಾನ ಕಾರ್ಯದರ್ಶಿ ಸುನೀಲ್ ಮಹಾಗಾವಂಕರ್, ಕಾರ್ಯದರ್ಶಿ ಮಹೇಶಚಂದ್ರ ಪಾಟೀಲ್ ಕಣ್ಣಿ, ಆನಂದ ಕಣಸೂರ,  ಸತೀಶ ಮಾಹೂರ, ಗುರುರಾಜ ಅಂಬಾಡಿ, ಸತೀಶ್ ಕೂಣಿನ, ಗುರುರಾಜ ಸುಂಟನೂರ ಸುನೀಲ್ ಕೂಳಕೂರ, ಕಿರಣ ಕಣ್ಣಿ, ಪ್ರಜ್ವಲ, ನಾಗೇಶ, ಶಾಂತು ರೇವೂರ, ವಿಜಯ ಪುರಾಣಿಕ, ಅಣ್ಣರಾಯ ಹೀರೆಗೌಡ, ಶರಣು ಕರೆಕಲ್, ಅಜಯ್ ರೆಡ್ಡಿ,   ಮಂಜು ವಾರದ್, ಅವಿನಾಶ ಗೂಬ್ಬೂರ, ಶಿವಕುಮಾರ್ ಸಾವಳಗಿ, ಆನಂದ ಕೇಶವ,ವೀಜಯಕುಮಾರ ಪಾಟೀಲ್, ಶಿವರಾಜ ಸಲಾಕಿ ನಿಖಿಲ್ ಬಿಲಗುಂದಿ, ಮತ್ತು ಸಮುದಾಯದ ಮುಖಂಡರು ಮತ್ತು ಮಹಾವೇದಿಕೆ ಪಧಾದಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here