ಬಿ.ವೈ ವಿಜಯೇಂದ್ರ ಜನ್ಮದಿನ: ವಿಶೇಷ ಪೂಜೆ, ಸೀರೆ ವಿತರಣೆ

0
13

ಕಲಬುರಗಿ: ಬಿಜೆಪಿ ಘಟಕದ ರಾಜ್ಯ ಉಪಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರ 47ನೇ  ಜನ್ಮದಿನದ ನಿಮಿತ್ತ ನವ ಕಲ್ಯಾಣ ಕರ್ನಾಟಕ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ  ನಗರದ ಆರಾಧ್ಯ ದೈವ ಶರಣಬಸವೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಅವರು ರಾಜಕೀಯದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಹೋಗಲಿ ಎಂದು ಪ್ರಾರ್ಥನೆ ಮಾಡಿ ದೇವಸ್ಥಾನದ ಆವರಣದಲ್ಲಿರುವ ವಯೋವೃದ್ಧರಿಗೆ ಹಾಗೂ ಸೇವಾಲಾಲ ಬಡಾವಣೆಯ ಮಹಿಳೆಯರಿಗೆ ಹಣ್ಣು ಹಂಪಲ ಮತ್ತು ಸೀರೆಗಳು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ಮಹಾಂತೇಶ ಕಲಶೆಟ್ಟಿ, ಉಪಾಧ್ಯಕ್ಷರಾದ ಅಂಬು ಕಂಬಾರ, ರವಿ ದೇಗಾಂವ, ಬಸವರಾಜ ಕೊರಳಿ, ಚಂದ್ರಕಾಂತ ಘೋಡ್ಕೆ, ಅಭಿಷೇಕ ಬಿರಾದಾರ ಹಾಗೂ ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here