ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಮೂಲನಿವಾಸಿ ಅಂಬೆಡ್ಕರ್ ಸೇನೆ ಬೇವಿನಾಳ ಗ್ರಾಮ ಶಾಖೆಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಮೊದಲಿಗೆ ಡಾ.ಬಿ.ಆರ್ ಅಂಬೆಡ್ಕರ ರವರ ಭಾವಚಿತ್ರಕ್ಕೆ ಪುಷ್ಫಗಳನ್ನು ಅರ್ಪಿಸಿ ತ್ರೀಸರಣ ಪಾಥರ್Àನೆಯನ್ನು ಸಲ್ಲಿಸಲಾಯಿತು.
ಈ ಸಭೆಯಲ್ಲಿ ರಾಜ್ಯ ಸಂಘಟನ ಸಂಚಾಲಕರಾದ ರಾಹುಲ್ ಹುಲಿಮನಿ ನೇತೃತ್ವ ವಹಿಸಿಕೊಂಡು ಮಾತನಾಡಿ, ಮಹಾತ್ಮ ಗೌತಮ ಬುದ್ಧನ ಕರುಣಾಮಯಿ ತತ್ವಗಳನ್ನು ಮತ್ತು ಅಣ್ಣ ಬಸವಣ್ಣನ ಸಮಾನತೆಯ ವಿಚಾರ ವಿಶೆಷವಾಗಿ ಬಾಬಾಸಾಹೇಬರ ಶಾಸನೊತ್ತರವಾಗಿ ಶೋಷಿತ ವರ್ಗದವರನ್ನು ವಿಮೋಚನೆಮಾಡಿದ್ದು ಮತ್ತು ಬುದ್ಧ ದಮ್ಮವನ್ನು ಬಿಗಿದಪ್ಪಿ ಮರಳಿ ಪ್ರಬುದ್ಧ ಬಾರತ ಕಟ್ಟುವ ದಾರಿಯಲ್ಲಿ ಸಾಗಬೇಕು ಹೋರಾಟದಿಂದ ನಮ್ಮ ಹಕ್ಕುಗಳನ್ನು ಪಡೆಯಬೇಕು ಅದೊಕ್ಕೊಸ್ಕರ ಯುವಕರು ಇತರೇ ಅನ್ಯ ವಿಚಾರಗಳಿಗೆ ಕಿವಿಗೊಡದನೆ ಮೂಢನಂಬಿಕೆಗಳಿಂದ ಹೊರಬರಲೇಬೆಕು ಮತ್ತು ಇದೆ ತಿಂಗಳೂ 26 ರಂದು ಸಂವಿದಾನ ಸಮರ್ಪಣಾ ದಿನವನ್ನು ನಮ್ಮ ಸಂಘಟನೆಯಿಂದ ಆಚರಿಸುವ ಸಮಾವೆಶವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರು ಭಾಗಹವಿಸಬೇಕು ಎಂದರು ಡಾ,ಅಂಬೇಡ್ಕರ್ ರವರ ಋಣವನ್ನು ಸ್ವಲ್ಪಾದರು ತೀರಿಸಲು ಬಯಸಿದರೆ ನಿಸ್ವಾರ್ತ ಸೇವೆಗಾಗಿ ಸಂಘಟನೆಯನ್ನು ಸೆರಿರಿ ಎಂದು ಕರೆ ನೀಡಿದರು.
ಸಭೆಯಲ್ಲಿ ಎಲ್ಲರ ಅಭಿಪ್ರಾಯದಂತೆ ಬೇವಿನಾಳ ಎಸ್,ಎಚ್ ಗ್ರಾಮ ಶಾಖೆಗೆ ನೂತನ ಪದಾಧಿಕಾರಿಗಳನ್ನಾಗಿ ಭಿಮಣ್ಣ ಬೇವಿನಾಳ ತಾಲೂಕು ಸಂಘಟನಾ ಸಂಚಾಲಕ, ಹಣಮಂತ ಕೊಡ್ಲಿ ಗ್ರಾಮ ಶಾಖೆ ಸಂಚಾಲಕ,ಮಂಜುನಾಥ ಸಾಸಗೇರಿ, ಗೋಪಾಲ್ ಬೇವಿನಗಿಡ, ಮಲ್ಲು ಏಳುಕೋಟಿ, ಮಲ್ಲು ತಳವಾರ, ಮಲ್ಲು ತಳವಾರ, ಮಂಜುನಾಥ ಜಾಲಹಳ್ಳಿ, ಸಿದ್ದು ತಳವಾರ, ಬಸವರಾಜ್ ತಳವಾರ, ಸಂಘಟನಾ ಸಂಚಾಲಕರು ಹಾಗೂ ಮಾಹಂತೇಶ ಬೇವಿನಗಿಡ ಗ್ರಾಮ ಶಾಖೆ ಖಜಾಂಚಿಯನ್ನಾಗಿ ನೇಮಕಗೊಳಿಸಲಾಯಿತು.
ಸಭೆಯಲ್ಲಿ ಬಾಗವಹಿಸಿದ್ದವರು. ಶಿವಣ್ಣ ಸಾಸಗೇರ, ನಾಗರಾಜ ಬೇವಿನ ಗಿಡ, ಹಣಮಂತ ರತ್ತಾಳ, ಶರಣು ಚಂದಲಾಪುರ, ಚಂದಪ್ಪ ಪಮಚಮ್, ಎಮ್,ಡಿ,ಗೌಸ್, ಅಯ್ಯಣ್ಣ ಗಜ, ವೆಂಕಟೇಶ ಪೂಜಾರಿ, ತಿಮ್ಮಣ್ಣ ತಳವಾರ, ಇತರರು ಬಾಗವಹಿಸಿದ್ದರು.
ಪರುಶುರಾಮ್ ಗೋವಾ ಸ್ವಾಗತಿಸಿದರು, ಅವಿನಾಶ ಹೊಸಮನಿ ವಂದಿಸಿದರು.