ರವೀಂದ್ರ ಶಾಬಾದಿಗೆ ಪಿತೃ ವಿಯೋಗ

0
28

ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ‌ ಸಂಚಾಲಕ, ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾಧ್ಯಕ್ಷ  ರವೀಂದ್ರ ಶಾಬಾದಿ ಅವರ ತಂದೆ ಭೋಗಲಿಂಗಪ್ಪ ಬಸಪ್ಪ ಶಾಬಾದಿ (100) ಸೋಮವಾರ ಬೆಳಗ್ಗೆ ನಿಧನರಾದರು.

ಮೃತರು ರವೀಂದ್ರ ಶಾಬಾದಿ ಸೇರಿದಂತೆ ನಾಲ್ಕು ಜನ ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಚಿಂಚೋಳಿ ತಾಲ್ಲೂಕಿನ ಪಟಪಳ್ಳಿ ಗ್ರಾಮದ ಅವರ ಸ್ವಂತ ಹೊಲದಲ್ಲಿ ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಶೋಕ ಸಂತಾಪ: ಶಾಸಕ ದತ್ತಾತ್ರೇಯ ಪಾಟೀಲ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಬಸವ ಕೇಂದ್ರದ ಶಿವಶರಣಪ್ಪ ಕಲ್ಬುರ್ಗಿ, ಸೋಮಣ್ಣ ನಡಕಟ್ಟಿ, ಶರಣಬಸವ ಕಲ್ಲಾ, ಬಸವ ಸಮಿತಿಯ ಡಾ. ವಿಲಾಸವತಿ ಖೂಬಾ, ಶರಣ ಸಾಹಿತ್ಯ ಪರಿಷತ್ ನ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ರಾಷ್ಟ್ರೀಯ ಬಸವ ದಳದ ಆರ್.ಜಿ. ಶೆಟಗಾರ, ವೈಜ್ಞಾನಿಕ ಸಂಶೋಧನಾ ಪರಿಷತ್ ನ ಡಾ. ಶಿವರಂಜನ ಸತ್ಯಂಪೇಟೆ, ಸತೀಶ ಸಜ್ಜನ, ಪರಮೇಶ್ವರ ಶೆಟಗಾರ ಇತರರು ಶೋಕ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here