CUK; ಜನಜಾತಿ ಗೌರವ್ ದಿವಸ್ ಆಚರಣೆ

0
17

ಕಲಬುರಗಿ: “ಬಗವಾನ್ ಬಿμರ್Á ಮುಂಡಾ ಒಬ್ಬ ಶ್ರೇಷ್ಠ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬುಡಕಟ್ಟು ನಾಯಕ. ಭಾರತದ ಬುಡಕಟ್ಟು ಪ್ರದೇಶಗಳಲ್ಲಿ ಭೂಕಬಳಿಕೆ ಮತ್ತು ಊಳಿಗಮಾನ್ಯ ಪದ್ಧತಿಯನ್ನು ಸ್ಥಾಪಿಸುವುದರ ವಿರುದ್ಧ ಹೋರಾಡಿದವರು” ಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.

ಬಾಗವಾನ್ ಬಿμರ್Á ಮುಂಡಾ ಅವರ ಜನ್ಮ ದಿನಾಚರಣೆಯನ್ನು ಜನಜಾತೀಯ ಗೌರವ ದಿವಸ್ ಎಂದು ಆಚರಿಸಿಲಾಗುತ್ತದೆ. ಅವರು ಮತ್ತಷ್ಟು ಮಾತನಾಡಿ “ಬ್ರಿಟಿμïರ ತಪ್ಪು ಭೂ ವ್ಯವಸ್ಥೆಯಿಂದಾಗಿ ಬುಡಕಟ್ಟು ಜನಾಂಗದವರ ತಮ್ಮ ಸ್ವಂತ ಭೂಮಿಯಲ್ಲಿ ಕಾರ್ಮಿಕರಾಗುವಂತಾಯಿತು.

Contact Your\'s Advertisement; 9902492681

ಬಿμರ್Á ಮುಂಡಾ ಇದರ ವಿರುದ್ಧದ ಜನಾಂದೋಲನವನ್ನು ನಡೆಸಿದರು ಮತ್ತು ಮುಂಡಾ ಸಾಮ್ರಾಜ್ಯವನ್ನು ಸ್ವತಂತ್ರ ಬುಡಕಟ್ಟು ಸಾಮ್ರಾಜ್ಯವೆಂದು ಘೋಷಿಸಿದರು. ಬ್ರಿಟಿಷರು ಅವರನ್ನು ಬಂಧಿಸಿ ಜೈಲಿಗೆ ಹಾಕಿದರು. ಅವರು 25 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಎಲ್ಲಾ ಭಾರತೀಯರಿಗೆ ಮತ್ತು ನಿರ್ದಿಷ್ಟವಾಗಿ ಭಾರತೀಯ ಬುಡಕಟ್ಟುಗಳಿಗೆ ಸ್ಫೂರ್ತಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜಾನಪದ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲಾಂಗ್‍ಶಿಬೀ ಕಿತಾನ್, “ಭಾರತೀಯ ಬುಡಕಟ್ಟುಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿವೆ. ಪ್ರಮುಖ ಸವಾಲುಗಳೆಂದರೆ ಜನಾಂಗೀಯ ಗುರುತಿನ ಪ್ರತಿಪಾದನೆ ಮತ್ತು ವರ್ಣಭೇದ ನೀತಿ, ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣದ ನಷ್ಟ ಮತ್ತು ಋಣಭಾರ, ಬಡತನ ಮತ್ತು ಮೂಲಭೂತ ಮೂಲಸೌಕರ್ಯಗಳ ಕೊರತೆ, ಸಂಪನ್ಮೂಲ ಶೋಷಣೆ ಮತ್ತು ಸ್ಥಳಾಂತರ, ಜೀವನಾಧಾರ ದುರುಪಯೋಗ ಮತ್ತು ಸಾಂಸ್ಕøತಿಕ ಗುರುತಿನ ನಷ್ಟ. ನಮ್ಮ ಬುಡಕಟ್ಟು ಜನಸಂಖ್ಯೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ನಾವು ಈ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ.”

ಇದೇ ಸಂದರ್ಭದಲ್ಲಿ ವಿಜಿಲೆನ್ಸ್ ಜಾಗೃತಿ ಸಪ್ತಾಹದ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿ ಶ್ರೀ. ಬಸವರಾಜ ಜಿಲ್ಲೆ, ಕಮಾಂಡರ್, ಕರ್ನಾಟಕ ಮೀಸಲು ಪೆÇಲೀಸ್, ಕಲಬುರಗಿ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

“ಈ ವರ್ಷದ ವಿಜಿಲೆನ್ಸ್ ಜಾಗೃತಿ ಸಪ್ತಾಹದ ಥೀಮ್ ‘ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರμÁ್ಟಚಾರ ಮುಕ್ತ ಭಾರತ’, ನಾವೆಲ್ಲರೂ ನಮ್ಮ ರಾಷ್ಟ್ರದ ಅಭಿವೃದ್ಧಿಗಾಗಿ ಭ್ರμÁ್ಟಚಾರ ಮುಕ್ತ ಭಾರತದ ಮಹತ್ವದ ಬಗ್ಗೆ ಸಂದೇಶವನ್ನು ಹರಡಬೇಕಾಗಿದೆ. ವಿದ್ಯಾರ್ಥಿಗಳೇ ಈ ದೇಶದ ಭವಿಷ್ಯ ನೀವೆಲ್ಲರೂ ಭ್ರμÁ್ಟಚಾರ ಮುಕ್ತ ದೇಶವನ್ನಾಗಿ ಮಾಡಬೇಕು. ಸಾರ್ವಜನಿಕ ವಲಯದಲ್ಲಿನ ಭ್ರμÁ್ಟಚಾರವನ್ನು ಕಡಿಮೆ ಮಾಡಲು ಸಕಾಲ ಮತ್ತು ಆರ್‍ಟಿಐ ಉತ್ತಮ ಪರಿಣಾಮ ಬೀರಿದೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಜಿಲೆನ್ಸ್ ಜಾಗೃತಿ ಸಪ್ತಾಹ ಆಚರಣಾ ಸಮಿತಿ ಅಧ್ಯಕ್ಷ ಪೆÇ್ರ.ಎಂ.ಎ.ಅಸ್ಲಂ, ಸಿಯುಕೆ ವಿಜಿಲೆನ್ಸ್ ಅಧಿಕಾರಿ ಡಾ.ಎಂ.ಡಿ. ಜೊಹೈರ್, ಜನಜಾತಿಯ ಗೌರವ ದಿವಸ್ ಕಾರ್ಯಕ್ರಮದ ಸಂಯೋಜಕಿ ಡಾ.ರೂಪ ಸೋನಾವಾಲ್, ಎಲ್ಲಾ ಡೀನ್‍ರು, ಮುಖ್ಯಸ್ಥರು, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here