ರಾಮಗಡ ನಾಗರಿಕರ ಹೋರಾಟ ಸಮಿತಿಯಿಂದ ಆಯುಕ್ತರಿಗೆ ಮನವಿ

0
22

ಶಹಾಬಾದ: ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಾಪ್ಪಿದ ಯುವತಿಯರ ಕುಟುಂಬಕ್ಕೆ ಪರಿಹಾರ ನೀಡಲು ಹಾಗೂ ಆಶ್ರಯ ಕಾಲೋನಿ ರಾಮಗಡ ನಿವಾಸಿಗಳ ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹಿಸಿ ರಾಮಗಡ ನಾಗರಿಕರ ಹೋರಾಟ ಸಮಿತಿಯ ನಿಯೋಗದಲ್ಲಿ ನಗರ ಸಭೆ ಆಯುಕ್ತರಾದ ಸುರೇಶ್ ವರ್ಮಾ ಅವರಿಗೆ ಮನವಿ ಸಲ್ಲಿಸಿದರು.

ನಗರದ ಹೊರ ಭಾಗದಲ್ಲಿರುವ ಅಲಸ್ಟಮ್ ಕಂಪನಿಯ ಹಿಂದುಗಡೆ ಇರುವ ಆಶ್ರಯ ಕಾಲೋನಿ ರಾಮಗಡ ಏರಿಯಾದಲ್ಲಿ ವಾಸಿಸುವ ಮಾಣಿಕಮ್ಮ ಸಾಯಪ್ಪ ದಾಸರ (20 ವರ್ಷ) ಹಾಗೂ ಕೀರ್ತಿಕಾ ರಾಜೇಶ (12 ವರ್ಷ) 11 ರಂದು ರೈಲು ಹಳಿಗಳ ಪಕ್ಕದಲ್ಲಿ ಇದ್ದ ಹೊಂಡದ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಾಪ್ಪಿದ್ದಾರೆ. ಎರಡು ಕುಟುಂಬಗಳ ಪರಿಸ್ಥಿತಿಯು ಬಹಳ ಬಡತನದಿಂದ ಕೂಡಿದೆ. ಒಂದು ತಿಂಗಳ ನಂತರ ಮದುವೆಯಾಗಬೇಕಿದ್ದ ಯುವತಿ ಮಾಣಿಕಮ್ಮಳ ಸಾವು ಅವರ ಕುಟುಂಬಕ್ಕೆ ಬಹಳ ದು:ಖದ ಸಂಗತಿಯಾಗಿದೆ.

Contact Your\'s Advertisement; 9902492681

ಮನೆಯಲ್ಲಿದ್ದ ಅಜ್ಜಿಗೆ ಆಸರೆಯಾಗಿದ್ದ ಮೊಮ್ಮಗಳು ಕೀರ್ತಿಕಾಳ ಸಾವು ಬಹಳ ದು:ಖದ ವಿಷಯವಾಗಿದೆ. ಸರಕಾರವು ಕೂಡಲೇ ಎರಡು ಕುಟುಂಬಕ್ಕೆ ಪರಿಹಾರವನ್ನು ನೀಡಬೇಕೆಂದು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆಸರೆಯಾಗಬೇಕೆಂದು ರಾಮಗಡ ನಾಗರಿಕರ ಹೋರಾಟ ಸಮಿತಿಯ ಸಂಚಾಲಕರಾದ ರಾಘವೇಂದ್ರ ಎಂ.ಜಿ ಹಾಗೂ ನಾಗಪ್ಪ ಖಣದಾಳ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಅಲ್ಲದೆ, ಆಶ್ರಯ ಕಾಲೋನಿ ರಾಮಗಡ ಪ್ರದೇಶಕ್ಕೆ ಯಾವುದೇ ರೀತಿಯ ನಾಗರಿಕ ಸೌಲಭ್ಯಗಳು ಸಿಗುತ್ತಿಲ್ಲ. ಏರಿಯಾಕ್ಕೆ ಸರಿಯಾದ ರಸ್ತೆಗಳಿಲ್ಲ. ಪೂರ್ಣ ಪ್ರಮಾಣದಲ್ಲಿ ಚರಂಡಿಯ ವ್ಯವಸ್ಥೆ ಇಲ್ಲ. ಇಡೀ ಬಡಾವಣೆಯನ್ನು ಸಮಗ್ರವಾಗಿ ಲೆಕ್ಕಕ್ಕೆ ತೆಗೆದುಕೊಂಡು ರಸ್ತೆ ಹಾಗೂ ರಸ್ತೆ ಬದಿ ಚರಂಡಿಗಳನ್ನು ತುರ್ತಾಗಿ ನಿರ್ಮಿಸಬೇಕಾಗಿದೆ. ಮತ್ತು ಬಡಾವಣೆಯಲ್ಲಿ ಸಮರ್ಪಕವಾಗಿ ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಸರಿಯಾದ ಸಮಯದಲ್ಲಿ ಬೊರವೆಲ್ಗಳ ರಿಪೇರಿಯಾಗುತ್ತಿಲ್ಲ, ಎಲ್ಲಾ ಸಮಸ್ಯೆಗಳಿಗೆ ಕಾರಣ ಬಡಾವಣೆಯು ಹಲವಾರು ವಾರ್ಡಗಳಿಗೆ ಹರಿದು ಹಂಚಿ ಹೋಗಿದೆ.

ಯಾವ ಸದಸ್ಯರು ಕೂಡಾ ಸಮಗ್ರವಾಗಿ ರಾಮಗಡ ಬಗ್ಗೆ ಕಾಳಜಿ ತೋರುತ್ತಿಲ್ಲ. ರಾಮಗಡಗೆ ಪ್ರತ್ಯಕವಾಗಿ ಒಂದು ವಾರ್ಡ್ ಆಗಬೇಕಾಗಿದೆ. ರಾಮಗಡಗೆ ಮೂಲಭೂತ  ಸೌಲಭ್ಯಗಳನ್ನು ಒದಗಿಸದೇ ಇದ್ದ ಪಕ್ಷದಲ್ಲಿ ಬರುವ ದಿನಗಳಲ್ಲಿ ರಾಮಗಡ ನಾಗರಿಕ ಹೋರಾಟ ಸಮಿತಿಯಿಂದ ಏರಿಯಾದ ಎಲ್ಲಾ ಜನರನ್ನು ಸಂಘಟಿಸಿ ನಗರ ಸಭೆಯ ಮುಂದೆ ಪ್ರತಿಭಟನೆ ಮಾಡುವದಾಗಿ ತಿಳಿಸಿದರು.

ರಾಮಗಡ ನಾಗರಿಕರ ಹೋರಾಟ ಸಮಿತಿಯ ನಿಯೋಗದಲ್ಲಿ ರಾಘವೇಂದ್ರ ಎಂ.ಜಿ, ನಾಗಪ್ಪ ಖನದಾಳ, ವಿಜಯಕುಮಾರ ಹುಲಿಯರ್, ಮಹೆಬೂಬ ಕಲಗುರ್ತಿ, ಶಾಮರಾವ ಕನಕ, ಬಸವರಾಜ ದೇವಕರ್, ಆನಂದ ಹೆಚ್.ಡಿ. ರಮೇಶ ದೇವಕರ್, ಯಂಕಪ್ಪ ಕೆಕನ್ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here