ಕೋಲಿ ಸಮಾಜವನ್ನು ಮುಖ್ಯ ವಾಹಿನಿಗೆ ತಂದ ಮಹಾನ ನಾಯಕ ವಿಠ್ಠಲ್ ಹೇರೂರ್

0
16

ಶಹಾಬಾದ: ನಗರದ ಅಶೋಕ ನಗರ ಬಡಾವಣೆಯ ನಿಜಶರಣ ಅಂಬಿಗರ ಚೌಡಯ್ಯನವರ ಸಮುದಾಯ ಭವನದಲ್ಲಿ ಕೋಲಿ ಸಮಾಜದ ವತಿಯಿಂದ ದಿ.ವಿಠ್ಠಲ ಹೇರೂರ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.

ಕೋಲಿ ಸಮಾಜದ ಗೌರವಾಧ್ಯಕ್ಷ ನಿಂಗಣ್ಣ ಹುಳಗೋಳಕರ್‍ಮಾತನಾಡಿ, ರಾಜ್ಯದಾದ್ಯಂತ ಸುಧೀರ್ಘವಾಗಿ ನಾಲ್ಕು ದಶಕಗಳ ಕಾಲ ತಮ್ಮ ಬದುಕಿನಲ್ಲಿ ಕೋಲಿ (ಕಬ್ಬಲಿಗ) ಸಮಾಜವನ್ನು ಎಸ್.ಟಿ ಸೇರಿಸಲು ಹೋರಾಟ ಮಾಡುವುದರ ಜೊತೆಗೆ ರಾಜಕೀಯ ಶೈಕ್ಷಣಿಕ ಅಭಿವೃದ್ಧಿಗಾಗಿ ಮುಂದೆ ಬರಲು ಕೋಲಿ ಸಮಾಜವನ್ನು ಮುಖ್ಯ ವಾಹಿನಿಗೆ ತಂದಿರುತಕ್ಕಂತ ಮಹಾನ ನಾಯಕ ಅವರು. ಇಂಥ ಮಹಾನ್ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಹೇರೂರ ಅವರಿಗೆ ಸಮಾಜದ ಬಗ್ಗೆ ಇರುವ ಕಾಳಜಿ ನಾವೆಂದು ಮರೆಯುವಂತಿಲ್ಲ. ಅವರ ವಿಚಾರಗಳನ್ನು ನಮ್ಮ ಆದರ್ಶವನ್ನಾಗಿಟ್ಟು ನಾವು ಹೇರೂರರವರು ಹಾಕಿದ ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು.

Contact Your\'s Advertisement; 9902492681

ನಗರ ಮತ್ತು ಗ್ರಾಮೀಣ ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ ಮಾತನಾಡಿ, ದಿ.ವಿಠ್ಠಲ್ ಹೇರೂರ ಅವರು ನಮ್ಮ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿ.ಅವರು ಬಿಟ್ಟು ಹೋದ ಆಧರ್ಶಗಳನ್ನು ನಾವೆಲ್ಲರೂ ಚಾಚು ತಪ್ಪದೇ ಅಳವಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕೆಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಅಲ್ಲಮಪ್ರಭು ಸೀಬಾ, ನಾಗರಾಜ ಯಡ್ರಾಮಿ, ಲೋಹಿತ್ ಮಳಖೇಡ, ಕಾಶಣ್ಣ ಚನ್ನೂರ್,ದೇವೆಂದ್ರಪ್ಪ ಯಲಗೋಡಕÀರ್,ರವಿ ಸಣತಮ್, ಮೌನೇಶ ಕೊಡ್ಲಿ, ನಾಗೇಶ ಮಣ್ಣೂರ್, ಪ್ರಶಾಂತ ಹದನೂರ, ಲಕ್ಷ್ಮಿಕಾಂತ ಮಸಭೋ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here