ಸಮಾಜದ ಏಳಿಗೆಗಾಗಿ ಹೋರಾಟ ನಡೆಸಿದ ಮುತ್ಸದ್ಧಿ ವಿಠ್ಠಲ್ ಹೇರೂರ್

0
11

ಶಹಾಬಾದ:ದಿ. ವಿಠ್ಠಲ್ ಹೇರೂರ ಅವರು ಕೋಲಿ ಸಮಾಜ ಸೇರಿದಂತೆ ಶೋಷಿತ ಸಮುದಾಯಗಳ ಏಳ್ಗೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಶಹಾಬಾದ ನಗರ ಹಾಗೂ ಗ್ರಾಮೀಣ ತಳವಾರ ಹೋರಾಟ ಸಮಿತಿ ಅಧ್ಯಕ್ಷ ಬೆಳೆಪ್ಪ ಖಣದಾಳ ಹೇಳಿದರು.
ಅವರು ಶನಿವಾರ ನಗರ ಹಾಗೂ ಗ್ರಾಮೀಣ ತಳವಾರ ಹೋರಾಟ ಸಮಿತಿ ವತಿಯಿಂದ ದಿ. ವಿಠ್ಠಲ ಹೇರೂರ ಅವರ ಪುಣ್ಯಸ್ಮರಣಾ ದಿನದ ನಿಮಿತ್ತ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು- ಹಂಪಲು ವಿತರಿಸಿ ಮಾತನಾಡಿದರು.

ಹಿಂದುಳಿದ ಕೋಲಿ ಸಮಾಜದ ಜನರಲ್ಲಿ ಜಾಗೃತಿ ಹಾಗೂ ಶಿಕ್ಷಣ ಅರಿವು ಮೂಡಿಸುವ ಮೂಲಕ ಹೋರಾಟ ಮಾಡಿದ ಧೀಮಂತ ನಾಯಕ ದಿ.ವಿಠ್ಠಲ ಹೇರೂರರ ತತ್ತ್ವಾದರ್ಶಗಳು ಸಮಾಜಕ್ಕೆ ನೀಡಿರುವ ಕೊಡುಗೆಯಾಗಿದೆ. ವೈಚಾರಿಕತೆ ಬೆಳೆಸಲು, ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ಬದುಕನ್ನೆ ಮುಡುಪಾಗಿಟ್ಟು ಸಮಾಜದ ಏಳಿಗೆಗಾಗಿ ಹೋರಾಟ ನಡೆಸಿದ ಮುತ್ಸದ್ಧಿ ವಿಠ್ಠಲ್ ಹೇರೂರು ಎಂದು ಹೇಳಿದರು.

Contact Your\'s Advertisement; 9902492681

ರಾಯಣ್ಣ ಬ್ರಿಗೇಡ್ ಜಿಲ್ಲಾಧ್ಯಕ್ಷ ಬಸವರಾಜ ಮದ್ರಿಕಿ ಮಾತನಾಡಿ, ಕೋಲಿ ಸಮಾಜದ ದಿಮಂತ ನಾಯಕರಾಗಿದ್ದ ದಿ. ವಿಠ್ಠಲ ಹೇರೂರರವರು ಕೋಲಿ ಸಮಾಜದ ಜನತೆಯನ್ನು ಒಂದುಗೂಡಿಸಲು ಅವರು ಮಾಡಿರುವ ಪ್ರಯತ್ನ ಹಾಗೂ ಸಮಾಜದ ಜನರನ್ನು ಜಾಗೃತಿಗೊಳಿಸಿದ ಏಕೈಕ ನಾಯಕ ಎಂದು ಹೇಳಿದರು.

ಜಯಂತ .ಎಸ್.ಬಳಗಾನೂರ,ಮಲ್ಲಿಕಾರ್ಜುನ ನಾಟೇಕಾರ,ಮಂಜುನಾಥ ಇಟಗಿ, ಸಿದ್ದು.ಡಿ.ತಳವಾರ,ಚಂದು.ಸಿ.ನಾಟೇಕಾರ, ಚಿದಾನಂದ ತಳವಾರ, ಶಿವರುದ್ರ ಹುಗ್ಗಿ, ಬಾಬುರಾವ ಹಾಗರಗುಂಡಿಗಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here