ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಕಾಂಗ್ರೆಸ್ ಬದ್ಧ: ಡಿ.ಕೆ.ಶಿವಕುಮಾರ

0
89

ಕಲಬುರಗಿ: ಕಾರ್ಮಿಕನ ಮಗನಾಗಿ ಹುಟ್ಟಿ ಐವತ್ತು ವರ್ಷಗಳ ನಿರಂತರ ಸಮಾಜ‌ಸೇವೆ ಮಾಡುವ ಮೂಲಕ‌ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಎತ್ತರದ ಸ್ಥಾನದಲ್ಲಿ ಕುಳಿತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಹೇಳಿದರು.

ಕಲಬುರಗಿ ಯಲ್ಲಿ ನಡೆದ ಕಲ್ಯಾಣ ಕ್ರಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಆರ್ಟಿಕಲ್ 371(J) ಖರ್ಗೆ ಅವರ ಕೊಡುಗೆಯಾಗಿದೆ. ಈ ಭಾಗದ ಅಭಿವೃದ್ದಿಯಾಗಬೇಕು ಅವರ ಕನಸಾಗಿತ್ತು. ಕಾಂಗ್ರೆಸ್ ಪಕ್ಷದ ಬದ್ದತೆ ಹಾಗೂ ಖರ್ಗೆ ಅವರ ಕಾಳಜಿ ಈ ಭಾಗದ ಜನರಿಗೆ ಅನುಕೂಲವಾಗಿದೆ ಎಂದರು.

Contact Your\'s Advertisement; 9902492681

ಕಕಭಾಗದ ಮೂಲಸೌಕರ್ಯ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರ ವಾರ್ಷಿಕ 5000 ಕೋಟಿ ಅನುದಾನ ನೀಡಲಿದ್ದೇವೆ. ಎಲ್ಲ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಲು ಬದ್ಧರಾಗಿದ್ದೇವೆ.ಕಕ ಭಾಗದ ಹುದ್ದೆ ಕೊಡಲು ಕೈಗಾರಿಕಾ‌ ನೀತಿ‌ ರೂಪಿಸಲು ಸಿದ್ದ. ಒಂದು ಲಕ್ಷ ಹುದ್ದೆಗಳನ್ನು ಖಾಸಗಿ ವಲಯದಲ್ಲಿ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here