ದಲಿತ (ಮಾದಿಗ) ಸಮಾಜದ ವಿಜಯಕುಮಾರಗೆ ಕಾಂಗ್ರೆಸ್ ಟಿಕೆಟ್ ನೀಡಲಿ

0
41

ಶಹಾಬಾದ : ಕಲಬುರಗಿ ಜಿಲ್ಲೆಯಲ್ಲಿ 2 ರಿಂದ 2.5 ಲಕ್ಷ ಮಾದಿಗ ಜನಸಂಖ್ಯೆಯಿದ್ದು 2023ರ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರಕ್ಕೆ ಮಾದಿಗ ಸಮಾಜದ ಮುಖಂಡ ವಿಜಯಕುಮಾರ ರಾಮಕೃಷ್ಣ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ ಪಾಲನೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಮತ್ತು ಡಿಎಮ್‍ಎಸ್‍ಎಸ್‍ನ ಅಧ್ಯಕ್ಷ ಶಿವರಾಜ ಕೋರೆ , ರವಿ ಬೆಳಮಗಿ ಎಐಸಿಸಿಗೆ ಹಾಗೂ ಕೆಪಿಸಿಸಿಗೆ ಒತ್ತಾಯಿಸಿದರು.

ಅವರು ಪ್ರವಾಸಿ ಮಂದಿರದಲ್ಲಿ ದಲಿತ ಮಾದಿಗ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ
ಚಿಂಚೋಳಿ, ಚಿತ್ತಾಪುರ ಹಾಗೂ ಕಲಬುರಗಿ ಗ್ರಾಮೀಣ ಎಸ್‍ಸಿ ಮೀಸಲು ಕ್ಷೇತ್ರಗಳ ಪೈಕಿ, ಕಲಬುರಗಿ ಗ್ರಾಮೀಣ ಮತಕ್ಷೇತ್ರಕ್ಕೆ ಮಾದಿಗ (ಎಡ) ಸಮಾಜದ ಅಭ್ಯರ್ಥಿಗೆ ಕಾಂಗ್ರೆಸ್‍ನಿಂದ ಟಿಕೆಟ್ ಕೊಟ್ಟು ಸಮಾಜದ ಪ್ರಗತಿಗೆ ಸಹಕರಿಸಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಹು ಸಂಖ್ಯಾತ ಮಾದಿಗರಿಗೆ ಕಾಂಗ್ರೆಸನಿಂದ ಟಿಕೆಟ್ ನೀಡುವಂತೆ ರಾಜ್ಯ ಸಮಿತಿಗೆ ಮನವಿ ಮಾಡಿದರು.

Contact Your\'s Advertisement; 9902492681

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಸರಿ ಸುಮಾರು ತಲಾ 28 ರಿಂದ 30 ಸಾವಿರಕ್ಕಿಂತ ಹೆಚ್ಚು ಮಾದಿಗ ಸಮಾಜದ ಮತದಾರರಿದ್ದು, ಕಳೆದ 2018 ರ ಚುನಾವಣೆಯಲ್ಲಿ ಮಾದಿಗ ಸಮಾಜದ ಕಾಂಗ್ರೆಸ ಪಕ್ಷದ ಅಭ್ಯರ್ಥಿ ವಿಜಯಕುಮಾರ ಜಿ. ರಾಮಕೃಷ್ಣ ರವರು ಅಲ್ಪ ಮತಗಳಿಂದ ಸೋಲು ಅನುಭವಿಸಿದ್ದಾರೆ. ಲೋಕ ಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಪ್ರಾಶಸ್ತ್ಯ ಪಡೆಯುವಲ್ಲಿ ಮಾದಿಗ ಸಮಾಜ ವಂಚಿತರಾಗುತ್ತಿದ್ದಾರೆ. ನಗರಸಭೆ, ಪುರಸಭೆ, ಗ್ರಾ.ಪಂ ಚುನಾವಣೆಗಳಲ್ಲಿಯೂ ಸಹ ಪರಿಗಣಿಸದೇ ಸಮಾಜವನ್ನು ನಿರ್ಲಕ್ಷ್ಯ ಮಾಡಿದ್ದಾರೆ.

ರಾಜಕೀಯ ಸ್ಥಾನಮಾನ ಸೇರಿದಂತೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸಮಾಜ ಹಿಂದುಳಿದಿದ್ದು ಬಹುಸಂಖ್ಯಾತರಿರುವ ಮಾದಿಗ ಸಮಾಜವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮಾಜದವರು ಕಾಂಗ್ರೆಸ್ ಪರ ಮತದಾರರಿದ್ದಾರೆ. ಈ ಸಮಾಜಕ್ಕೆ ಸೂಕ್ತ ಪ್ರಾಶಸ್ತ್ಯ ನೀಡಬೇಕಿದ್ದು, ಕಾಂಗ್ರೆಸ್‍ನಿಂದ ವಿಜಯಕುಮಾರ ರಾಮಕೃಷ್ಣ ಅವರಿಗೆ ಟಿಕೆಟ್ ಕಲ್ಪಿಸಿದರೆ ಗೆಲ್ಲಿಸಿ ಕೊಡುವ ಖಚಿತ ಭರವಸೆ ವ್ಯಕ್ತಪಡಿಸಿದರು.

ಈ ಬಗ್ಗೆ ಶೀಘ್ರ ನಿಯೋಗ ತೆರಳಿ ಕಾಂಗ್ರೆಸನ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಇತರೆ ಮುಖಂಡರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ನಾಗಪ್ಪ ರಾಯಚೂರಕರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here