ಕಾಳಗಿ: ಜೆಡಿಎಸ್ ಪದಾಧಿಕಾರಿಗಳ ಪದಗ್ರಹಣ

0
30

ಕಾಳಗಿ: ತಾಲೂಕಿನ ಶ್ರೀ ನೀಲಕಂಠ ಕಾಳೆಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಚಿಂಚೋಳಿ ತಾಲೂಕ ಜೆಡಿಎಸ್ ಅಭ್ಯರ್ಥಿ ಸಂಜೀವನ್ ಯಾಕಾಪುರ ಅವರ ನೇತೃತ್ವದಲ್ಲಿ ತಾಲೂಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯಾಕಾಪುರ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ , ನಿರುದ್ಯೋಗ ಸಮಸ್ಯೆಗಳ ನಿವಾರಣೆ ಹಾಗೂ ರಾಜ್ಯದ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಿದೆ.ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ಯೋಜನೆಯಾದ ಪಂಚರತ್ನ ಯೋಜನೆ ಜಾರಿಗೆ ತರುವುದಾಗಿ ತಿಳಿಸಿದರು.

Contact Your\'s Advertisement; 9902492681

ಹಾಗೂ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷ ಸಂಘಟನೆಗೆ ಸಮಯ ಮೀಸಲೀಡಲು ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು. ಈ ಸಂಧರ್ಭದಲ್ಲಿ ರಾಹುಲ್ ಯಾಕಪುರ್, ಜೆಡಿಎಸ್ ಕಾಳಗಿ ತಾಲೂಕ ಅಧ್ಯಕ್ಷ  ಗೌರಿಶಂಕರ ಸುರವಾರ, ಧನರಾಜ್ ನಾಟಿಕರ್, ಶಾಂತಕುಮಾರ್, ಲಾಲಪ್ಪ ಹಾಳ್ಕರ್, ಶೇಖಪ್ಪ ವಟರ್, ಬೀರಪ್ಪ ಪೂಜಾರಿ,ರೇವಣಸಿದ್ಧ ಪೂಜಾರಿ, ಮಾಣಿಕ ಮುಕರಂಬಿ ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here