ಮಾಜಿ ಸಿಎಂ ದಿ. ಡಾ. ಎನ್ ಧರ್ಮಸಿಂಗ್ ಜನ್ಮದಿನದ ನಿಮಿತ್ತ ಧರ್ಮಪ್ರಜೆ ಪ್ರಶಸ್ತಿ ಪ್ರದಾನ ನಾಳೆ

0
166

ಕಲಬುರಗಿ: ರಾಜಕೀಯ ವಲಯದಲ್ಲಿ ಅಜಾತಶತ್ರು ಮಾಜಿ ಸಿಎಂ ದಿ. ಡಾ. ಎನ್ ಧರ್ಮಸಿಂಗ್ ಅವರ ಜನ್ಮದಿನದಂಗವಾಗಿ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಧರ್ಮಪ್ರಜೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಾಳೆ ಡಿ.24 ರಂದು ಜರುಗಲಿದೆ.

ಡಿ.24 ರಂದು ಸಾಯಂಕಾಲ 4.15 ಕ್ಕೆ ನಗರದ ಕನ್ನಡ ಭವನದಲ್ಲಿ ಧರ್ಮಸಿಂಗ್ ಅವರ ಒಡನಾಡಿಗಳಾದ ವಿವಿಧ ಕ್ಷೇತ್ರದ ಪ್ರಮುಖರಾದ ಹಿರಿಯರಾದ ದೇವೇಂದ್ರಪ್ಪ ಮರತೂರ, ತಿರುಪತಿ ದೇಸಾಯಿ ವಡಗೇರಾ, ಸಿದ್ದಣ್ಣಾ ಬಂಗಾರಿ ನೆಲೋಗಿ, ರುಕುಮ್ ಪಟೇಲ್ ಕೂಡಿ, ಶಿವರಾಜ ಮುಗಳಿ ಓಕಳಿ ಅವರನ್ನು ಧರ್ಮಪ್ರಜೆ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾರ್ಯಕ್ರಮದ ಸಂಚಾಲಕ ಬಿ ಎಂ ಪಾಟೀಲ ಕಲ್ಲೂರ ತಿಳಿಸಿದ್ದಾರೆ.

Contact Your\'s Advertisement; 9902492681

ಸಾರಂಗಮಠದ ಜಗದ್ಗುರು ಪೂಜ್ಯ ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ವೈದ್ಯ ಡಾ. ಎಸ್ ಬಿ ಕಾಮರೆಡ್ಡಿ, ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ ಸೇರಿದಂತೆ ಅನೇಕರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here