ಯಡ್ರಾಮಿ : ಪ್ರತಿ ವರ್ಷ ಜನವರಿ 1 ರಂದು ಹೊಸ ವರ್ಷಕ್ಕೆ ಭೀಮಾ ಕೋರೆಗಾಂವ ವಿಜಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷವೂ 205ನೇ ವಿಜಯೋತ್ಸವವನ್ನು ಯಡ್ರಾಮಿ ಪಟ್ಟಣದಲ್ಲಿ ಭಾರತ ರತ್ನ ಡಾ. ಬಾಬಾ ಸಾಹೇಬ್ ಭೀಮರಾವ ಅಂಬೇಡ್ಕರ್ ಅಭಿಮಾನಿಗಳ ಬಳಗ ವತಿಯಿಂದ ಆಚರಣೆ ಮಾಡಲಾಗುತ್ತದೆ ಎಂದು 131 ಡಾ. ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರಕಾಶ ಬಡಿಗೇರ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಯಡ್ರಾಮಿ ಕಾಂಗ್ರೆಸ್ ಮುಖಂಡ ಹಯ್ಯಳಪ್ಪಾ ಗಂಗಾಕರ್ ಮತ್ತು ಬಿಜೆಪಿ ಮುಖಂಡ ಗೊಲ್ಲಳಪ್ಪಾ ಗೆಜ್ಜಿ ಉದ್ಘಾಟಿಸುವರು. ಜಿ. ಎಫ್. ಜಿ. ಸಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಶೆಟ್ಟಿ ವಿಶೇಷ ಉಪನ್ಯಾಸ ನೀಡುವರು.
ಡಾ. ಪ್ರಕಾಶ ಬಡಿಗೇರ ಮತ್ತು ಅನಿಲ್ ಟೆಂಗಳಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು. ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ.