ದಿ. ನಟ ವಿಷ್ಣುವರ್ಧನ್ 13ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

0
11

ಸುರಪುರ: ನಗರದ ತಿಮ್ಮಾಪುರದಲ್ಲಿ ದಿ:ನಟ ವಿಷ್ಣುವರ್ಧನ್ ಅವರ 13ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲಾಯಿತು.ತಾಲೂಕು ವಿಷ್ಣು ಸೇನಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೇನೆಯ ತಾಲೂಕು ಅಧ್ಯಕ್ಷ ಮಲ್ಲು ವಿಷ್ಣುಸೇನಾ ನಟ ವಿಷ್ಣುವರ್ಧನ್ ಅವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,ನಮ್ಮೆಲ್ಲರ ನೆಚ್ಚಿನ ನಟರಾಗಿರುವ ವಿಷ್ಣುವರ್ಧನ್ ಅವರು ನಮ್ಮನ್ನಗಲಿ 13 ವರ್ಷಗಳಾಗಿವೆ,ಆದರೆ ವಿಷ್ಣುವರ್ಧನ್ ಅವರು ಭೌತಿಕವಾಗಿ ನಮ್ಮಿಂದ ದೂರವಾದರು ಅವರು ನಮ್ಮೆಲ್ಲರ ಮನದಲ್ಲಿ ಸದಾಕಾಲ ಜೀವಂತವಾಗಿದ್ದಾರೆ,ಅವರು ಕನ್ನಡ ನಾಡಿಗೆ ನೀಡಿದ ಕೊಡುಗೆ ನಮ್ಮ ಕಣ್ಮುಂದಿದೆ,ಅವರು ನಮ್ಮೆಲ್ಲರಿಗೂ ನೀಡಿದ ಸಂದೇಶ ಸದಾಕಾಲ ಪಾಲಿಸೋಣ ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರು ನಡೆಯೋಣ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಸಿದ್ರಾಮ ಎಲಿಗಾರ,ಶಿವಕುಮಾರ,ಮಹೇಶ,ದೇವರಾಜ್,ರಾಮು,ಕಾಮಣ್ಣ ದೊರೆ, ನಾಗರಾಜ, ಯಲ್ಲಪ್ಪ,ಚೋಟು,ಸಾಗರ,ಸಿದ್ದರಾಮ ವಾಯ್,ಭೀಮು ಖಾನಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here