ಸುಗಮ ಸಂಗೀತೋತ್ಸವ ,ಸಾಧಕರಿಗೆ ಪ್ರಶಸ್ತಿ ಪ್ರದಾನ

0
55

ಕಲಬುರಗಿ: ಸಂಗೀತ ಕೇಳುವುದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದುಜಿಲ್ಲಾಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.

ನಗರದ ಹಿಂದಿ ಪ್ರಚಾರ ಸಭಾದಲ್ಲಿ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕøತಿಕಛಾಯಾಚಿತ್ರ ಕಲಾ ಸಂಸ್ಥೆಯುಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸುಗಮ ಸಂಗೀತೋತ್ಸವಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ಸನಾತನ ಕಾಲದಿಂದಲೂ ಸಂಗೀತಕ್ಕೆತನ್ನದೇಆದವೈಶಿಷ್ಟ್ಯತೆ ಇದೆ.ಸಂಗೀತ ಕೇಳುವುದರಿಂದ ನಾನಾ ಪ್ರಕಾರದ ರೋಗಗಳಿಂದ ಮುಕ್ತರಾಗಬಹುದುಎಂಬುದನ್ನು ವೈಜ್ಞಾನಿಕವಾಗಿದೃಢಪಟ್ಟಿದೆ. ನಮ್ಮ ಭಾಗದಲ್ಲಿ ಸಂಗೀತಕಲಾವಿದರಕೊರತೆಯಿಲ್ಲಆದರೆಕಲಾವಿದರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಕಲೆ, ಸಂಗೀತ, ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆಎಂದು ಹೇಳಿದರು.

Contact Your\'s Advertisement; 9902492681

ನಿವೃತ್ತಆರೋಗ್ಯ ನಿರೀಕ್ಷಣಾಧಿಕಾರಿ ಬಾಬುರಾವಚಿತ್ತಕೋಟಾ, ಕಸಾಪ ದಕ್ಷಿಣ ವಲಯದಅಧ್ಯಕ್ಷ ಶಾಮಸುಂದರಕುಲಕರ್ಣಿ, ಭಾರತೀಯಯುವಕಾಂಗ್ರೆಸ್‍ರಾಷ್ಟ್ರಿಯ ಸಂಯೋಜಕಚೇತನಗೋನಾಯಕ, ಗ್ರಾ.ಪಂ. ಸದಸ್ಯ ರೇವಣಸಿದ್ದಯ್ಯ ಮಠಪತಿ, ಬಸವರಾಜ, ಸಂಸ್ಥೆಯ ಕಾರ್ಯದರ್ಶಿ ಬಸವರಾಜತೋಟದ ಉಪಸ್ಥಿತರಿದ್ದರು.

ಕೆ.ಗಿರಿಮಲ್ಲಅಧ್ಯಕ್ಷತೆ ವಹಿಸಿದ್ದರು.ಬಸಯ್ಯಗುತ್ತೇದಾರತೆಲ್ಲೂರ ಪ್ರಾರ್ಥಿಸಿದರು.ಮಲ್ಲಪ್ಪ ಗೋಗಿ ಸ್ವಾಗತಿಸಿದರು. ವಿಶ್ವನಾಥ ತೊಟ್ನಳ್ಳಿ ನಿರೂಪಿಸಿದರು.ನಂತರದತ್ತರಾಜಕಲಶೆಟ್ಟಿ, ಬಸಯ್ಯಗುತ್ತೇದಾರ, ಸಿದ್ಧಾರೂಡ ಅವರಳ್ಳಿ, ಸರಸ್ವತಿದೇವಣಿ, ಅನುರಾಧಾಬಳೂರ್ಗಿ ಸುಗಮ ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಶಸ್ತಿ ಪುಸ್ಕೃತರು: ವಿವಿಧಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೇರಿ ಮಾರ್ಗರೇಟ್, ಶರಣಗೌಡ ಪಾಟೀಲ್‍ಕಣ್ಣೂರ, ಮಲ್ಲಿನಾಥ ಹೂಗಾರ, ಕವಿತಾ ಕಾವಳೆ, ಬಾಬು ಪೂಜಾರಿ, ಶಿವಪುತ್ರ ಪಾಟೀಲ್, ಬಸವರಾಜ ಮಾಲಿಪಾಟೀಲ್, ಅಪ್ಸರ್ ಪಟೇಲ್, ಅಂಬಾರಾಯ ವಾಡೇಕರ್, ಮಹಾಮುನೀರ್ ನಾಯಕ, ಧ್ರುವಂತಆಲೂರಅವರಿಗೆ ಪ್ರಶಸ್ತಿ ನೀಡಿಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here