ಕಾಳಗಿ: ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಯುವಕರು

0
132

ಕಾಳಗಿ: ತಾಲೂಕಿನ ರಾಜಾಪೂರ ಗ್ರಾಮದ ಹಿರಿಯ ಬಿಜೆಪಿ ಮುಖಾಂಡರಾದ ಬ್ರಹ್ಮನಂದ್ ರೆಡ್ಡಿ ಪಟೇಲ್ ರ ನೇತೃತ್ವದಲ್ಲಿ 120 ಕ್ಕು ಹೆಚ್ಚು ಯುವಕರು ಹಾಗೂ ಹಿರಿಯರು ಕಲಬುರಗಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಹಾಗೂ ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ವ್ಹಿ. ರಾಠೋಡ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ನಂತರ ನಮ್ಮ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಬ್ರಹ್ಮನಂದ್ ರೆಡ್ಡಿ ಪಟೇಲ್, ನಮ್ಮ ಗ್ರಾಮದಲ್ಲಿ ನಾನೆಂದರೆ ಬಿಜೆಪಿ, ಬಿಜೆಪಿ ಎಂದರೆ ನಾನು ಎನ್ನುವ ರೀತಿಯಲ್ಲಿತ್ತು,ಆದರೆ ವಲಸಿಗರು ಹಾಗೂ ಮೂಲ ಬಿಜೆಪಿ ಗರ ಮಧ್ಯ ತಾರತಮ್ಯ, ಮತ್ತು ಜಾತೀಯತೆ ಹೆಚ್ಚಾಗಿದ್ದು, ರೈತರ ಮತ್ತು ಬಡವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬದಲು , ತುಟಿಗೆ ಬೆಲ್ಲಾ ಹಚ್ಚಿ ಬಾಯಿಗೆ ಮಣ್ಣು ತುಂಬುವ ಕೆಲಸ ಬಿಜೆಪಿ ಮಾಡುತ್ತಿದ್ದು, ಅದಕ್ಕಾಗಿ ಬಿಜೆಪಿ ಪಕ್ಷ ತೊರೆದು,
ಕಾಂಗ್ರೇಸ್ ಪಕ್ಷ ಹಾಗೂ ಸುಭಾಷ್ ರಾಠೋಡ್ ರ ಚಿಂತನೆಗಳಿಗೆ ಮನಸೋತು ನನ್ನ ಬೆಂಬಲಿಗರೊಂದಿಗೆ ಕಾಂಗ್ರೇಸ್ ಪಕ್ಷ ಸೇರಿದ್ದಾಗಿ ತಿಳಿಸಿದರು.

Contact Your\'s Advertisement; 9902492681

ಈ ಸಂಧರ್ಭದಲ್ಲಿ ದೇವಿಂದ್ರಪ್ಪ ಹೆಬ್ಬಾಳ, ಬಸ್ಯಯ ಗುತ್ತೇದಾರ, ಭೀಮರಾವ್ ಟಿ ಟಿ, ಬಸವರಾಜ್ ಪಾಟೀಲ್, ವೇದಪ್ರಕಾಶ್ ಮೊಟಗಿ, ರಾಘವೇಂದ್ರ ಗುತ್ತೇದಾರ, ಶಿವಾನಂದ ಮಜ್ಜಗಿ, ಅಪ್ಪಾರಾವ್ ಸೌಕಾರ್, ಬಸವರಾಜ್ ಕೊಲಕುಂದಿ, ಗಣಪತಿ ಹಾಳಕಾಯಿ,ಜಗನಾಥ್ ಚಂದಕೇರಿ, ರವಿದಾಸ್ ಪತಂಗೆ, ಗೌರಿಶಂಕರ್ ಗುತ್ತೇದಾರ, ಜಿಯಾವೋದ್ದೀನ್ ಸೌದಾಗರ್, ಸೇರಿದಂತೆ ಅನೇಕ ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here