ಭರವಸೆಯ ಬೆಳಕು: ಶಿಕ್ಷಣ ಕ್ಷೇತ್ರದ ಭರವಸೆ ಹೆಚ್ಚಿಸುವ ಪುಸ್ತಕ

0
9

ಕಲಬುರಗಿ: ಪ್ರಸ್ತುತ ಶಿಕ್ಷಣ ರಚನಾತ್ಮಕ ಅನುಷ್ಠಾನವಾಗುತ್ತಿದೆ. ಶಿಕ್ಷಕರು, ಅಧಿಕಾರಿಗಳು ಹಾಗೂ ಸಮುದಾಯ ಜೊತೆಗೂಡಿ ಧನಾತ್ಮಕ ಆಲೋಚನೆಯೊಂದಿಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು.

ಈ ಭೂಮಿಯ ಮೇಲೆ ಸಮೃದ್ಧ ಮಾನವ ಸಂಪನ್ಮೂಲ ತಯಾರಿಸುವ ಏಕೈಕ ಕ್ಷೇತ್ರ ಶಿಕ್ಷಣ. ಈ ದೇಶದಲ್ಲಿ ಅದೊಂದು ಕ್ಷೇತ್ರ ಸುಧಾರಣೆಯಿಂದ ಎಲ್ಲವೂ ಸುಧಾರಣೆಯಾಗಲಿದೆ. ಈ ಕ್ಷೇತ್ರ ಬದಲಾಗಲು ಇಲ್ಲಿರುವ ಶಿಕ್ಷಕರು, ಅಧಿಕಾರಿಗಳು, ಶಾಲೆಗಳು, ಪಾಲಕರು ತಮ್ಮೊಳಗೆ ಗುಣಾತ್ಮಕ ಬಲಾವಣೆಯೊಂದಿಗೆ ಮುನ್ನುಗ್ಗಬೇಕಿದೆ. ಇವರೆಲ್ಲರೂ ರಚನಾತ್ಮಕವಾಗಿ ಆಲೋಚಿಸಬೇಕಿದೆ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಈ ಕ್ಷೇತ್ರದ ಫಲಾನುಭವಿಗಳಾಗುತ್ತಾರೆ. ಎಲ್ಲರಲ್ಲಿಯೂ ಗುಣಾತ್ಮಕ ಬದಲಾವಣೆಯಾಗದ ಹೊರತು ಸಮೃದ್ಧ ಮಾನವ ಸಂಪನ್ಮೂಲ ರಚನೆ ಗಗನಕುಸುಮವಾಗಿದೆ.

Contact Your\'s Advertisement; 9902492681

ಈ ಪುಸ್ತಕದಲ್ಲಿ ಶಿಕ್ಷಣ ಕ್ಷೇತ್ರದ ಮಹತ್ವದ ಫಲಾನುಭವಿಗಳಾದ ಶಾಲೆಗಳು, ಶಿಕ್ಷಕರು, ಅಧಿಕಾರಿಗಳು ಮತ್ತು ಪಾಲಕರನ್ನು ಗುರಿಯಾಗಿಸಿಕೊಂಡು ಅವರಲ್ಲಿ ಗುಣಾತ್ಮಕ, ರಚನಾತ್ಮಕ ಬದಲಾವಣೆ ತರಲು ಪೂರಕವಾಗುವ ಲೇಖನಗಳನ್ನು ಒಳಗೊಂಡಿದೆ. ಶೈಕ್ಷಣಿಕ ಕ್ಷೇತ್ರ ಗುಣಾತ್ಮಕ ಅಂಶಗಳನ್ನು ಪರಿಚಯಿಸುತ್ತಾ ಅವುಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಪರಿಚಯಿಸುವ ಮತ್ತು ಪಸರಿಸುವ ಕೆಲಸವನ್ನು ಈ ಪುಸ್ತಕ ಮಾಡಲಿದೆ.

ಈ ಪುಸ್ತಕ ಶಿಕ್ಷಕರ ಕೈಪಿಡಿಯಾದರೆ, ಮಕ್ಕಳ ಜ್ಞಾನದ ಬಂಢಾರವಾಗಲಿದೆ, ಪಾಲಕರ ದಾರಿದೀಪವಾಗುತ್ತದೆ. ಶೈಕ್ಷಣಿಕ ಮಾರ್ಗದರ್ಶಿಯಾಗುತ್ತದೆ. ಶಿಕ್ಷಣ ಕ್ಷೇತ್ರದ ಸಂಪನ್ಮೂಲಗಳ ಒಳನೋಟವಾಗಲಿದೆ ಎಂಬುವುದು ಇದರ ಪ್ರಮುಖವಾದ ಆಶೆಯ. “ಭರವಸೆಯ ಬೆಳಕು” ಶಿಕ್ಷಣ ಕ್ಷೇತ್ರದ ಭರವಸೆಯನ್ನು ಹೆಚ್ಚಿಸುವ ಪುಸ್ತಕ ಎಂದು ಇತ್ತೀಚಗೆ ಪುಸ್ತಕದ ಮುಖಪುಟ ಬಿಡುಗಡೆಗೊಳಿಸಿ ಡಾ.ವಾಸುದೇವ ಸೇಡಂ ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಕ್ಷಣ ಪ್ರೇಮಿ ಕಾಶೀನಾಥ ಮರತೂರ, “ಭರವಸೆಯ ಬೆಳಕು” ಪುಸ್ತಕವು ಶಿಕ್ಷಣ ಕ್ಷೇತ್ರವನ್ನು ಅತ್ಯಂತ ಧನಾತ್ಮಕ ದೃಷ್ಠಿಯಿಂದ ಗಮನಿಸಿ ಒಳ್ಳೆಯ ಅಂಶಗಳನ್ನು ಬಿಚ್ಚಿಡುತ್ತದೆ. ಶಿಕ್ಷಣ ಕ್ಷೇತ್ರವನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತದೆ. ಈ ಪುಸ್ತಕವು ಯುವಕರು, ಪಾಲಕರು, ಶಿಕ್ಷಕರು ಅಧಿಕಾರಿಗಳಿಗೆ ಮಾಹಿತಿ ನೀಡುವುದರ ಜೊತೆಗೆ ಕೆಲಸಮಾಡಲು ಪ್ರೋತ್ಸಾಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕರಾದ ಕೆ.ಎಂ.ವಿಶ್ವನಾಥ ಮರತೂರ, ಮಾತನಾಡಿ “ಭರವಸೆಯ ಬೆಳಕು” ಪುಸ್ತಕವು ನನ್ನ ಕ್ಷೇತ್ರಮಟ್ಟದಲ್ಲಿ ಕೆಲಸ ಮಾಡಿದ ಅನುಭವಗಳ ಅಕ್ಷರ ರೂಪವಾಗಿದೆ. ಇಂದು ವಾಸುದೇವ ಸೇಡಂ ಅವರು ಪುಸ್ತಕದ ಮುಖಪುಟ ಬಿಡಿಗಡೆಗೊಳಿಸಿದ್ದು ಅತ್ಯಂತ ಸಂತೋಷವಿದೆ. ಈ ಪುಸ್ತಕ ನನ್ನ ಬರವಣಿಗೆ ಬದುಕಿನ ಮತ್ತೊಂದು ಮೈಲಿಗಲ್ಲಾಗುತ್ತದೆ. ಕ್ಷೇತ್ರದಲ್ಲಿ ಅನೇಕ ಧನಾತ್ಮಕ ಅಂಶಗಳನ್ನು ಹಿಡಿದಿಡುವ ಪ್ರಯತ್ನ ಮಾಡಿರುವೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಕೊಡುಗೆ ಕೊಡಬೇಕು ಎಂದು ಆಶೆಯವನ್ನು ಹೊಂದಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here