ಮತ್ತೊಮ್ಮೆ ಅವಕಾಶ ಕೊಡಿ – ಚಿತ್ರಣ ಬದಲು: ಎಚ್ ಡಿ ಕುಮಾರಸ್ವಾಮಿ

0
19

ಆಳಂದ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಿ ಮತ್ತೊಮ್ಮೆ ಅಧಿಕಾರಕ್ಕೆ ಅವಕಾಶ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡರು.

ತಾಲೂಕಿನ  ಖಜೂರಿ ಗ್ರಾಮದಲ್ಲಿ ಪಂಚರಥ ಯಾತ್ರೆಯಲ್ಲಿ  ಗ್ರಾಮಸ್ಥರನ್ನು ಉದ್ದೇಶಿಸಿ  ಮಾತನಾಡಿದ ಅವರು,ಜೆಡಿಎಸ್ ಅಭ್ಯರ್ಥಿ ಮಹೇಶ್ವರಿ ವಾಲಿ ಅವರಿಗೆ ಮತ ಹಾಕಿ,ಒಂದು ಅವಕಾಶ ಕೊಡಿ ಎಂದು ಭಾವುಕರಾಗಿ ಮತದಾರರನ್ನು ಕೇಳಿಕೊಂಡರು.

Contact Your\'s Advertisement; 9902492681

ಖಜೂರಿ ಗ್ರಾಮದ ಹೊರವಲಯದಿಂದ ಗ್ರಾಮದ ಬಸವೇಶ್ವರ ಮೂರ್ತಿಯ ತನಕ ಮೆರವಣಿಗೆ  ಮಾಡಲಾಯಿತು. ಬಳಿಕ ತಡೋಳಾ, ನಿರಗುಡಿ ಪಡಸಾವಳಿ ಹಿರೋಳ್ಳಿ ಸರಸಂಬಾ ಗ್ರಾಮದಲ್ಲಿ ರಥಯಾತ್ರೆ ನಡೆಸಿ ಮುನ್ನಳ್ಳಿ ಗ್ರಾಮದಲ್ಲಿ ಗ್ರಾಮ  ವಾಸ್ತವ್ಯ ಮಾಡಿದರು.

ಅದ್ದೂರಿ ಸ್ವಾಗತ : ಮುಂಬರುವ ರಾಜ್ಯ ವಿಧಾನ ಸಭಾ  ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಪಂಚ ರಥಯಾತ್ರೆ ಗಡಿ ಗ್ರಾಮ ಖಜೂರಿಯಲಿ ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ವತಿಯಿಂದ ಸೋಮವಾರ  ಅದ್ದೂರಿಯಾಗಿ ಮಹಿಳೆಯರ ಕುಂಬ ಕಳಸದಿಂದ

ತಾಲೂಕು ಜೆಡಿಎಸ್ ಅಭ್ಯರ್ಥಿ ಮಹೇಶ್ವರಿ ವಾಲಿ ಅವರ  ನೇತೃತ್ವದಲ್ಲಿ ತೊಗರಿಯಿಂದ ತಯಾರಿಸಿದ ಹಾರವನ್ನು  ಕ್ರೇನ್ ಮೂಲಕ ಹಾಕಿ ಸ್ವಾಗತಿಸಿದರು.

ತಾಲೂಕು  ಜೆಡಿಎಸ್ ಅಧ್ಯಕ್ಷ ಮಲ್ಲಿನಾಥ್ ಯಲಶೇಟ್ಟಿ,ಶರಣು ಕುಲಕರ್ಣಿ, ಜಫರ್ ಸೇಟ್ , ಹತೀಕ ಅನ್ಸಾರಿ,ಇಲಿಯಾಸ್ ಅನ್ಸಾರಿ,ಮುಸ್ತಾಕ ಹೇರುರ್ ಸೇರಿದಂತೆ ಪಕ್ಷದ ಮುಖಂಡರು,ಕಾರ್ಯಕರ್ತರು,ಮಹಿಳೆಯರು ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here