ಮದನಹಿಪ್ಪರಗಿ: ಜೆಸ್ಕಾಂ ಗ್ರಾಹಕರ ಸಂವಾದ ಸಭೆ

0
24

ಮಾದನಹಿಪ್ಪರಗಿ: ಸ್ಥಳೀಯ ಜೆಸ್ಕಾಂ ಶಾಖಾ ಕಚೇರಿಯಲ್ಲಿ ಕಲಬುರಗಿಯ ಕಾರ್ಯನಿರ್ವಾಹಕ ಅಭಿಯಂತರರಾದ ಸಂತೋಷ ಚವ್ಹಾಣ ಹಾಗೂ ಆಳಂದದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ನಟರಾಜ ಇವರ ನೇತೃತ್ವದಲ್ಲಿ ಮಾದನಹಿಪ್ಪರಗಿ ಅಡಿಯಲ್ಲಿ ಬರುವ ಸುತ್ತಮುತ್ತಲಿನ ಹಳ್ಳಿಗಳ ವಿದ್ಯುತ ಗ್ರಾಹಕರ ಸಂವಾದ ಸಭೆ ಇಂದು ಜರುಗಿತು.

ಕೇರೂರ ಗ್ರಾಮದ ರೈತ ಮುಖಂಡ ರಾಹುಲ ಪಾಟೀಲ ಮಾತನಾಡಿ, ಪದೆ ಪದೇ ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗುತ್ತಿವೆ. ಆರ್‍ಆರ್ ನಂಬರ ಇಲ್ಲದ ಸಂಪರ್ಕಗಳನ್ನು ಕಟ್ ಮಾಡಿರಿ ಇಲ್ಲವೆ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿರಿ. ರೈತರ ಕಬ್ಬು ಒಣಗಿ ಹೋಗುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವದನ್ನು ತಪ್ಪಿಸಿರಿ ನಿಮ್ಮ ಕಾಲಿಗೆ ಬೀಳುತ್ತೇನೆಂದು ಭಾವುಕರಾಗಿ ಹೇಳಿದರು.

Contact Your\'s Advertisement; 9902492681

ಚಂದ್ರಕಾಂತ ಕಡಗಂಚಿ, ನಿಂಗದಳ್ಳಿ ಗ್ರಾಮದಲ್ಲಿ 15 ದಿನಗಳ ಹಿಂದೆ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದೆ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ ಎಂದರು. ಮದಗುಣಕಿಯ ಬಾಬುಗೌಡ ಪಾಟೀಲ ಮಾತನಾಡಿ ನನ್ ಕಬ್ಬಿಗೆ 15 ದಿನದಿಂದ ನೀರು ಇಲ್ಲ.ನನ್ನ ಹೊಲಕ್ಕೆ ಬರುವ ವಾಯರ ಕಟ್ ಮಾಡಿದ್ದಾರೆ. ವರ್ಷದ ಬೆಳೆ ಕಣ್ಣ ಮುಂದೆ ಒಣಗಿ ಹೋಗುತ್ತಿರುವುದು ನೋಡಿದರೆ ಹೊಟ್ಟೆಯಲ್ಲಿ ಸಂಕಟವಾಗುತ್ತದೆ. ವಾಯರ ಹಾಕಿಕೊಡಿ ಎಂದು ಸಿಬ್ಬಂಧಿಗಳಿಗೆ ಹೇಳಿದರೂ ಏನು ಪ್ರಯೋಜನವಿಲ್ಲ ಎಂದರು.

ಇನ್ನು ಹಲವಾರು ರೈತರ ಸಮಸ್ಯೆಗಳನ್ನು ಆಲಿಸಿದ ಕಾರ್ಯನಿರ್ವಾಹಕ ಅಭಿಯಂತರರು ಮಾತನಾಡಿ ಶೀಘ್ರ ಸಂಪರ್ಕ ಯೋಜನೆಯಲ್ಲಿ 25 ಕೆವಿ ಟ್ರಾನ್ಸಫಾರ್ಮಗಳು ಎರಡು ಮೂರು ರೈತರು ಸೇರಿಕೊಂಡು ಮಾಡಿಕೊಳ್ಳಬೇಕು. ಇನ್ನು ಮುಂದೆ ಮಾದನಹಿಪ್ಪರಗಿ ವಿದ್ಯುತ್ ಕೇಂದ್ರಕ್ಕೆ 13 ಕಿ.ಮೀ ದೂರದ ಮಾಡಿಯಾಳದಿಂದ ಸಂಪರ್ಕ ನೀಡಲಾಗುವುದು. ಕಾಮಗಾರಿ ಮಾರ್ಚ ಅಥವಾ ಏಪ್ರಿಲ್ ತಿಂಗಳಲ್ಲಿ ಮುಗಿಯುತ್ತದೆ. ಇನ್ನು ನಾಲ್ಕು ದಿನಗಳಲ್ಲಿ ಮಾದನಹಿಪ್ಪರಗಿ ಶಾಖೆಯಡಿಯಲ್ಲಿ ಬರುವ ಗ್ರಾಮಗಳಿಗೆ ಲೋಡ ಶೆಡ್ಡಿಂಗ ಇರುವುದಿಲ್ಲ. ಇದು ರೈತರಿಗೆ ಅನುಕೂಲವಾಗಲಿದೆ ಎಂದರು.

ಆಳಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಾತನಾಡಿ ಪರವಾನಗಿ ಇಲ್ಲದೆ, ಆರ್‍ಆರ್ ನಂಬರ ಇಲ್ಲದೆ ಅಕ್ರಮವಾಗಿ ಪಂಪಸೆಟ್‍ಗಳಿಗೆ ಸಂಪರ್ಕ ಪಡೆದಿದ್ದಾರೆ ಎಂದು ದೂರು ಬಂದರೆ ಮುಲಾಜಿಲ್ಲದೆ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.

ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಲ್ಲಿನಾಥ ಪಾಟೀಲ, ಜಿಲ್ಲಾ ಕಾಂಗ್ರೆಸ್ ಕಿಸಾನ ಘಟಕದ ಪ್ರಧಾನ ಕಾರ್ಯದರ್ಶಿ ನಿಲೇಶ ತೋಳನೂರ, ಸೀತಾರಾಮ ಜಮಾದಾರ, ಅಮೃತ ಟೋಣ್ಣೆ, ಇತರ ರೈತರು ಹಾಜರಿದ್ದರು. ಜೆಇಗಳಾದ ಪರಮೇಶ್ವರ ಬಡಿಗೇರ, ಯಲ್ಲಾಲಿಂಗ ಶಿರೂರ, ಸಿದ್ದರಾಮ ದೇವಣಗಿ, ಎಒ ನಿಂಬೆಣ್ಣ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here