ಕಲಬುರಗಿ: ಉದನೂರು ಗ್ರಾಮದ ಜೋಡಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಕಡಿಕೋಳ ಶ್ರೀ ಮಡಿವಾಳೇಶ್ವರ ಪುರಾಣ ಕಾರ್ಯಕ್ರಮಕ್ಕೆ ಕಡಗಟ್ಟಿಯ ಪರಮಪೂಜ್ಯ ವೀರಭದ್ರ ಶಿವಾಚಾರ್ಯರು ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಗುತ್ತೇರ್ಗಾವ್ ಸಿದ್ದಮ್ಮಾಂಬೆ ತಾಯಿ ನೇತೃತ್ವ ವಹಿಸಿದರು. ಗಂಗಾಧರ್ ಶಾಸ್ತ್ರಿಗಳಿಂದ ಕಡಿಕೋಳ ಮಡಿವಾಳೇಶ್ವರರ ಪುರಾಣ ನಡೆಯಿತು. ಸಂಗೀತ ಡಾ. ನಾಗರಾಜ್ ಕೋಟ್ನೂರ್, ಹಾರ್ಮೋನಿಯಂ ಶಿವಕುಮಾರ್ ಜಾಲಹಳ್ಳಿ ತಬಲಾ ಬಸವರಾಜ ಚಲಗೇರಿ ರಿದಂ ಪ್ಯಾಡ್ ಬಲು ಉದನೂರು, ಶಿವಲಿಂಗಯ್ಯ ಸ್ವಾಮಿ ಮಠಪತಿ, ನೀಲಕಂಠ ಪಾಟೀಲ್ ಬಲ ಭೀಮ್ ಬಿರಾದಾರ್ ಶಿವಪುತ್ರ ಮಾಲಿ ಪಾಟೀಲ್ ಸೇರಿದಂತೆ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.