ವಿಜಯನಗರ: ಶ್ರೀಗುರು ಕೊಟ್ಟೂರೇಶ್ವರರ ರಥೋತ್ಸವ ಫೆಬ್ರವರಿ 12 ರಿಂದ

0
11

ವಿಜಯನಗರ: ಐತಿಹಾಸಿಕ ವಿಜಯನಗರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಕೊಟ್ಟೂರಿನಲ್ಲಿ ಪವಾಡಪುರುಷ ಶ್ರೀಗುರು ಕೊಟ್ಟೂರೇಶ್ವರರ ರಥೋತ್ಸವ ಫೆಬ್ರವರಿ 16 ರಂದು ಜರುಗಲಿದೆ. ಅಂದು ಸಂಜೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಭಕ್ತರ ಆರಾಧ್ಯದೈವ ಶ್ರೀ ಗುರುಕೊಟ್ಟೂರೇಶ್ವರ ರಥದ ಗಡ್ಡೆಯನ್ನು ಹೊರಹಾಕಲಾಯಿತು.

ನೆರೆದಿದ್ದ ಭಕ್ತರು “ಶ್ರೀ ಗುರು ಕೊಟ್ಟೂರು ದೊರೆಯೇ ನಿನಗಾರು ಸರಿಯೇ… ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್‌ ಎಂಬ ಜಯಘೋಷ ಮೊಳಗಿಸುತ್ತ ರಥದ ಗಡ್ಡೆಯನ್ನು ಹೊರಹಾಕಲಾಯಿತು.

Contact Your\'s Advertisement; 9902492681

ಮುಂದಿನ ತಿಂಗಳು ಫೆಬ್ರವರಿ 12 ರಿಂದ ಫೆಬ್ರವರಿ 20ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ. 12 ಭಾನುವಾರ ರಾತ್ರಿ ಬೆಳ್ಳಿ ರಥದಲ್ಲಿ ನಾಗರೋತ್ಸವ,13 ಸೋಮವಾರ ರಾತ್ರಿ ನವಿಲು ವಾಹನೋತ್ಸವ, 14 ಮಂಗಳವಾರ ರಾತ್ರಿ ಗಜವಾಹನೋತ್ಸವ,15 ಬುಧವಾರ ರಾತ್ರಿ ವೃಷಭ ವಾಹನೋತ್ಸವ ಜರುಗಲಿದ್ದು, 16 ಗುರುವಾರ ಸಾಯಂಕಾಲ ಸ್ವಾಮಿಯ ಮಹಾರಥೋತ್ಸವ  ಜರುಗಲಿದೆ.17 ಶುಕ್ರವಾರ ರಾತ್ರಿ ಮದಾಲ್ಸಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here