ಲಾರಿ ಚಾಲಕ, ಮಾಲಿಕ, ಮೆಕ್ಯಾನಿಕ್ ಸಿಬ್ಬಂದಿಗಳಿಗೆ ಉಚಿತ ನೇತ್ರ ತಪಾಸಣೆ ಶಿಬಿರ

0
7

ಕಲಬುರಗಿ: ಇಲ್ಲಿನ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಚೇರಿ-ಕೆಎ 32 ಹಾಗೂ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಸ್ವಚ್ಛತಾ ಸಪ್ತಾಹ ಯೋಜನೆಯಡಿಯಲ್ಲಿ ಲಾರಿ ಚಾಲಕ, ಮಾಲಿಕ ಮತ್ತು ಮೆಕ್ಯಾನಿಕ್ ಸಿಬ್ಬಂದಿಗಳಿಗಾಗಿ ನಗರ ಹೊರವಲಯದ ಮಹಾತ್ಮಗಾಂಧಿ ಲಾರಿ ತಂಗುದಾಣದಲ್ಲಿರುವ ಸಾರಿಗೆ ಸದನದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ಡಾ.ಯಶರಾಜ ಜಾಧವ್, ಡಾ.ಸ್ವಾತಿ ರೆಡ್ಡಿ, ಡಾ.ಭಾಗ್ಯಮ್ಮ ಪಾಟೀಲ ಅವರು ನೇತ್ರ ತಪಾಸಣೆ ನಡೆಸಿದರು. ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ ನೇಮಜಿ, ಜಗನ್ನಾಥ ಪಾಟೀಲ, ಶಿವಕುಮಾರ ಡೊಂಗರಗಾಂವ, ಸೈಯದ್ ಲಿಕಾಯತ್ ಅಲಿ, ಯುನೂಸ್ ಖಾನ್, ಮಹ್ಮದ್ ಆಲ್ಫಾಕ್, ವೀರಯ್ಯ ಸ್ವಾಮಿ, ಖಾಜಾ ಪಟೇಲ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here