‘ಮತ್ತೆ ಕಲ್ಯಾಣ’ ಪೂರ್ವಭಾವಿ ಸಭೆ

0
68

ಕಲಬುರಗಿ: ಆ. 29ರಂದು ಕಲಬುರಗಿಯಲ್ಲಿ ನಡೆಯಲಿರುವ ಮತ್ತೆ ಕಲ್ಯಾಣ ಕಾರ್ಯಕ್ರಮದ ಯಶಸ್ಸಿನ ಹಿನಲ್ಲೆಯಲ್ಲಿ ನಗರದ ಶಹಾಬಜಾರ್ ಸುಲಫಲ ಮಠದಲ್ಲಿ ಭಾನುವಾರ ಸಂಜೆ ಮತ್ತೆ ಪೂರ್ವಭಾವಿ ಸಭೆ ಜರುಗಿತು.

ವಿವಿಧ ಸಮಿತಿಗಳ ರಚನೆ ಮಾಡಿ, ಅವರಿಗೆ ಜವಾಬ್ದಾರಿಯನ್ನು ವಹಿಸಲಾಯಿತು. ಸಂವಾದ ಕಾರ್ಯಕ್ರಮದಲ್ಲಿ ಹೆಚ್ಷಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಕರೆ ತರಬೇಕು ಎಂದು ನಿರ್ಧರಿಸಲಾಯಿತು.

Contact Your\'s Advertisement; 9902492681

ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ತೆರಳಿ ಅಲ್ಲಿಯೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲು ನಿರ್ಧರಿಸಲಾಯಿತು. ನಗರದ ವಿವಿಧ ಕಾಲೇಜುಗಳಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮದ ಬಗ್ಗೆ ಸಂವಾದ ನಡೆಸಬೇಕೆಂದು ತೀರ್ಮಾನಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾದ ಪ್ರಭುಲಿಂಗ ಮಹಾಗಾಂವಕರ್, ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ, ಮತ್ತೆ ಕಲ್ಯಾಣ ರಾಜ್ಯ ಸಂಚಾಲಕ ಸುನಿಲ್ ಹುಡಗಿ ಇತರರು ಭಾಗವಹಿಸಿದ್ದರು.

ಬಸವರಾಜ ಮೊರಬದ, ಮಹಾಂತೇಶ್ ಕಲಬುರಗಿ, ಶಿವಶರಣಪ್ಪ ದೇಗಾಂವ, ರೇವಣಸಿದ್ದಯ್ಯ ಮಠಪತಿ, ನಾಗರಾಜ ಕಾಮಾ, ಬಸವರಾಜ ಶೇರಿಕಾರ, ಬಸವರಾಜ ಧೂಳಾಗುಂಡಿ, ಅಯ್ಯಣ್ಣಗೌಡ ಪಾಟೀಲ, ರಾಜು ಕಾಡಾದಿ, ಎಸ್.ವಿ ನಿಂಗಪ್ಪ, ಉದಯಕುಮಾರ ಸಾಲಿ, ಡಾ. ನಾಗರಾಜ ದಂಡೋತಿ, ಬಸವರಾಜ ಕಟ್ಟಿ, ವಿರೇಶ ಮಾಲಿಪಾಟೀಲ, ಮಹಾದೇವಪ್ಪ ಯಳವಂತಗಿ, ನಳಿನಿ ಮಹಾಗಂವಕರ,  ಧನರಾಜ, ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here