ಮಹಾದೇವಿಯಕ್ಕಗಳ ಸಮ್ಮೇಳನಕ್ಕೆ ತೆರೆ

0
57

ಕಲಬುರಗಿ: 12ನೇ ಶತಮಾನ ನೆನಪಿಸುವಂತಹ ಕಾರ್ಯಕ್ರಮ ಇದಾಗಿದ್ದು, ಇಂತಹ ಸಮ್ಮೇಳನ ನಡೆಸುವ ಮೂಲಕ ಮಹಿಳಾ ಸಂವೇದನೆಗಳಿಗೆ ಉತ್ತಮ ವೇದಿಕೆ ಸಿಗುವಂತಾಗಿದೆ ಎಂದು ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ. ಶಾರದಾ ಜಾಧವ ನುಡಿದರು.

ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ನಿನ್ನೆಯಿಂದ ನಡೆದ ಮಹಾದೇವಿಯಕ್ಕಗಳ ಸಮ್ಮೇಳನದ ಮಂಗಲದ ಹರಹು ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಬಸವಣ್ಣ ಅನ್ನುವ ಹೆಸರೇ ಒಂದು ಸ್ಫೂರ್ತಿ. ಶರಣರ ಆಲೋಚನೆ ದೂರಗಾಮಿಯಾಗಿದ್ದವು. ಶರಣ ಚಿಂತನೆಗಳನ್ನು ಆಚರಿಸಿದರೆ ಸಾಲದು.‌ ಅವುಗಳನ್ನು ಬದುಕಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ಮಹಿಳಾ ಸಂವೇದನೆ, ಮಹಿಳಾ ಪ್ರತಿಭೆ ಅನಾವರಣದ ವೇದಿಕೆಯಂತಿತ್ತು. ಪ್ರತಿ ಬಾರಿಗಿಂತ ಈ ಬಾರಿಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಅರ್ಥಪೂರ್ಣ ಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು

ಲಿಂಗವ ಪೂಜಿಸಿ ಫಲವೇನಯ್ಯ ಎಂದು ಹೇಳಿದ ಬಸವಣ್ಣನವರು, ಸಮರತಿ, ಸಮಕಳೆ, ಸಮಸುಖ ಸಮಾಜದಲ್ಲಿ ಬಯಸಿದರು. ಅಸಮಾನತೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿದ ಶರಣರು ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಹೇಳಿದರು. ಕಾಯಕ-ದಾಸೋಹ ಸಿದ್ಧಾಂತವನ್ನು ಬೋಧಿಸಿದ ಶರಣರು ಸ್ತ್ರೀಯರಿಗೆ ಮೊಟ್ಟ ಮೊದಲು ಸ್ವಾತಂತ್ರ್ಯ ಒದಗಿಸಿದರು. ಮಾನವೀಯ ಮೌಲ್ಯದಿಂದ ಕೂಡಿದ ವಚನ ಸಾಹಿತ್ಯದ ಅಧ್ಯಯನ ಅಗತ್ಯ ಎಂದು ಅವರು ವಿವರಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷೆ ಮಾತೋಶ್ರೀ ದಾಕ್ಷಾಯಿಣಿ ಎಸ್. ಅಪ್ಪ, ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಶರಣಮ್ಮ ಕಲಬುರಗಿ, ಕಾರ್ಯದರ್ಶಿ ಅನಸೂಯಾ ನಡಕಟ್ಟಿ, ಸಂಚಾಲಕಿ ಡಾ. ಜಯಶ್ರೀ ದಂಡೆ ವೇದಿಕೆಯಲ್ಲಿ ಇದ್ದರು.

ಇದೇ ವೇಳೆಯಲ್ಲಿ ಪ್ರೊ. ಶಾಂತಲಾ ನಿಷ್ಠಿ, ಪ್ರೊ. ಪೂರ್ಣಿಮಾ ಪಾಟೀಲ, ಪ್ರೊ. ಚಿತ್ರಲೇಖಾ, ಪ್ರೊ. ಮಂಗಲಾ ಉಪ್ಪಿನ್, ಮೀನಾಕುಮಾರಿ, ಮಂಜುಳಾ ಜಾನೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಶಿವಲೀಲಾ ಶೀಲವಂತರ ಹಾಗೂ ಡಾ. ಶಿವಲೀಲಾ ಚಟ್ನಳ್ಳಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here