ಇದು ಕಲ್ಯಾಣ ಕರ್ನಾಟಕ ಉತ್ಸವವಲ್ಲ, ಕೆಕೆಆರ್ಡಿಬಿ ಹಣದಲ್ಲಿ ಅಪ್ಪುಗೌಡ ಉತ್ಸವ; ಮಾಜಿ ಎಂಎಲ್ಸಿ

0
82
  • ಕೆಕೆಆರ್ಡಿಬಿ ಅಧ್ಯಕ್ಷರ ವಿರುದ್ಧ ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಟೀಕೆ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕೆಕೆಆರ್ಡಿಬಿಯಿಂದ 5 ಕೋಟಿ ರುಪಾಯಿ ಬಳಸುತಿರೋದನ್ನ ತೀವ್ರವಾಗಿ ಆಕ್ಷೇಪಿಸಿರುವ ಮಾಜಿ ಎಂಎಲ್ಸಿ, ಕಾಂಗ್ರೆಸ್ ಮುಕಂಡ ಅಲ್ಲಂಪ್ರಭು ಪಾಟೀಲ್ ಆತುರದ ಉತ್ಸವದಲ್ಲಿ ಈ ಬಾಗದ ಕಲೆ, ಸಂಸ್ಕøತಿ, ಸಾಹಿತ್ಯದ ಚರ್ಚೆಗಳಿಗಿಂತ ಹೆಚ್ಚಾಗಿ ಮಂಡಳಿಯ ಅ್ಯಕ್ಷ, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ (ಅಪ್ಪುಗೌಡ) ಅವರ ಪೋಟೋಗಳೇ ರಾರಾಜಿಸುತ್ತಿವೆ. ಹೀಗಾಗಿ ಇದು ಕೆಕೆಆರ್ಡಿಬಿ ಹಣದಲ್ಲಿನ ಅಪ್ಪುಗೌಡ ಉತ್ಸವವಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.

ಹೇಳಿಕೆ ನೀಡಿರುವ ಅವರು ಮಂಡಳಿಯ ಹಣ ಪ್ರಗತಿಗೆ ಮಾತ್ರ ಬಳಸಬೇಕು ಎಂಬ ಕಟ್ಟುನಿಟ್ಟು ನಿಯಮವಿದ್ದರೂ ಇಂತಹ ಉದ್ದೇಶ ರಹಿತ ಉತ್ಸವಗಳಿಗೆ ಬಳಸಲಾಗುತ್ತಿದೆ. ಉತ್ವದಲ್ಲಿನ ಸಂಗೀತ, ಸಾಹಿತ್ಯದ ಕಲಾವಿದರಾಗಿ ಹೊರಗಿನವರಿಗೆ ಮಣೆ ಹಾಕಿದ್ದಾರೆ, ಸ್ಥಳೀಯರನ್ನು ಸುಮ್ನೇ ಹೆಸರಿಗೆ ಬಳಸಲಾಗುತ್ತಿದೆ. ಉತ್ಸವದಲ್ಲಿ ಕಲೆ, ಸಂಸ್ಕøತಿ ಅನಾವರಣಕ್ಕಿಂತ ಶಾಸಕ ಅಪ್ಪುಗೌಡರ ರಾಜಕೀಯ ರೂಪಗಳ ಅನಾವರಣ ಸಾಗಿದೆ ಎಂದು ಅಲ್ಲಂಪ್ರಭು ಕುಟುಕಿದ್ದಾರೆ.

Contact Your\'s Advertisement; 9902492681

ಉತ್ಸವ ಮಾಡುವ ಸಮಯ ಇದಲ್ಲ, ಮಕ್ಕಳು, ಯುವಕರು ಎಲ್ಲರು ಪರೀಕ್ಷೆ ಎದುರಿಸುತ್ತಿದ್ದಾರೆ. ಕಲ್ಯಾಣದ ಜಿಲ್ಲೆಗಳಲ್ಲಿ ಪೀರಕ್ಷೆಗಳ ಸಮಯ, ಪಿಯುಸಿ ಮಕ್ಕಳು ಎಸ್ಸೆಸ್ಸೆಲ್ಸಿ ಮಕ್ಕಳು ಓದಿನಲ್ಲಿದ್ದರೆ. ಹೈಸ್ಕೂಲ್ ಮ್ಕಳಿಗೆ ಪರೀಕ್ಷೆ ನಡೆಯುತ್ತಿವೆ. ಇವರೆಲ್ಲರು ಉತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವೆ? ಹಣವಿದೆ ಅಂತ ಬೇಕಾಬಿಟ್ಟಿ ಬಳಸಲಾಗುತ್ತಿದೆ. ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ಉತ್ಸವ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಬಾಲಿವುಡ್, ಟಾಲಿವುಟ್, ಸಾಂಡಲ್ ಉಡ್ ಎಂದು ದುಬಾರಿ ಹಣ ಪಡೆಯುವ, ಆ ಮೂಲಕ ಪ್ರದರ್ಶನ ನೀಡುವವರಿಗೆ ಹೆಚ್ಚಿಗೆ ಆಹ್ವಾನಿಸಲಾಗಿದೆ. ಇದು ಬೇಕಿತ್ತಾ? ಕಲ್ಯಾಣದ ಉತ್ಸವ ಸ್ಥಳೀಯರ ಉತ್ಸವವಾಗಬೇಕಿತ್ತು. ಅದೆಲ್ಲ ಬಿಟ್ಟು ಈಗಾಗಲೇ ಹೆಸರು ಮಾಡಿರುವವರನ್ನೇ ಕರೆದು ಕುಣಿಸಿದರೆ, ಹಾಡಿಸಿದರೆ ನಮ್ಮ ಪ್ರತಿಭೆಗಳಿಗೆ ಅವಕಾಶ ನೀಡಿದಂತೆ ಆಗುವುದಾ? ನಮ್ಮ ಪ್ರತಿಭೆಗಳಿಗೆ ವೇದಿಕೆ ಸಿಗದೆ ಹೋದರೆ ಮಂಡಳಿಯ ಹಣ ಹೀಗೆ ವ್ಯರ್ಥ ವೆಚ್ಚ ಮಾಡೋದು ಯಾವ ಪುರುಷಾರ್ಥಕ್ಕಾಗಿ? ಎಂದು ಅಲ್ಲಂಪ್ರಭು ಪ್ರಶ್ನಿಸಿದ್ದಾರೆ.

ನಗರಾದ್ಯಂತ ಕಂಬಗಳಿಗೆ ಅಪ್ಪುಗೌಡರ ಫೆÇೀಟೋಗಳಿರುವ ಬ್ಯಾನರ್ ಮಾತ್ರಕ್ಷ ಕಾಣುತ್ತಿವೆ. ಪಾಲಿಕೆಯವರು, ಜಿಲ್ಲಾಡಡಳಿತ ಅನ್ಯರ ಫ್ಲೆಕ್ಸ್ ಕಂಡರೆ ಹರಿದು ಹಾಕುತ್ತದೆ. ಅಪ್ಪುಗೌಡರದ್ದು ಕಂಡರೂ ಕಾಣದಂತೆ ತನ್ನ ಪಾಡಿಗೆ ತಾನಿದೆ. ಬ್ಯಾನರ್ ಹಚ್ಚಲು ಅವರು ಪರವಾನಿಗೆ ಪಡೆದಿದ್ದಾರಾ? ಕಲ್ಯಾಣ ಕರ್ನಾಟಕ ಮಂಡಳಿ ಎಂದರೆ ಕೇವಲ ಅಪ್ಪುಗೌಡರು ಒಬ್ಬರೇನಾ? ಮಂಡಳಿಗೆ ಸದಸ್ಯರಿದ್ದಾರೆ. ಯಾರೊಬ್ಬರ ಪೆÇೀಟೋಗಳನ್ನು ಬಳಸಲಾಗಿಲ್ಲ, ಏಕವ್ಯಕ್ತಿ ವೈಭವೀಕರಣ ಸಾಗಿದೆ. ಅದೂ ಸರ್ಕಾರದ ಹಣದಲ್ಲೇ ನಡೆದಿರೋದು ಆತಂಕದ ಸಂಗತಿ, ಇದನ್ನು ಎಲ್ಲರೂ ಖಂಡಿಸಲೇಬೇಕು ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಪಾಲಿಕೆ ಪೌರ ಕಾರ್ಮಿಕರಾದ ದೇವೀಂದ್ರ, ಅಂಬರೀಷ ಹಾಗೂ ವೆಂಕಣ್ಣ ಇವರು ಎಂದಿನಂತೆ ಅಡ್ಡಾದಿಡ್ಡಿ ಕಟ್ಟಿರುವ ಫಲೆಕ್ಸ್ ತೆಗೆದು ಹಾಕಲು ಮುಂದಾಗುತ್ತಿದ್ದಂತೆಯೇ ಶಾಸಕರ ಕಡೆಯವರು, ಅವರ ಅಭಿಮಾನಿಗಳು ಪಾರ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ. ಅವರೀಗ ಜಿಮ್ಸ್ನಲ್ಲಿ ದಾಖಲಾಗಿದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಗೂಂಡಾ ಪ್ರವೃತ್ತಿ ಶಾಸಕರ ಬೆಂಬಲಿಗರು ಮಾಡುತ್ತಿದ್ದಿದ್ದು ಇದನ್ನು ತಾವು ಖಂಡಿಸುವುದಾಗಿ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here