ಕಾಳಗಿ: ರಾಜ್ಯದ ಸರಕಾರಿ ನೌಕರರು ಅತಿ ನ್ಯಾಯಯುತವಾಗಿ ಸೇವೆ ಸಲ್ಲಿಸುತ್ತಿದ್ದು, ಸರಕಾರ ನೌಕರರಿಗೆ ಕ್ಯಾರೇ ಎನ್ನುತ್ತಿಲ್ಲ, ನೌಕರರ ಬೇಡಿಕೆ ಇಡೆಸಿದಿದ್ದರೆ ಸರ್ವ ತ್ಯಾಗಕ್ಕೂ ಸಿದ್ದನಿದ್ದೆವೆ ಎಂದು ಸ.ನೌ.ಸ.ಕಾಳಗಿ ಅಧ್ಯಕ್ಷ ಶರಣಗೌಡ ಪೋಪಾಟೀಲ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿಯೋಜನೆಯನ್ನು ಜಾರಿಗೊಳಿಸಬೇಕು ಸರ್ಕಾರಿ ನೌಕರರ ಕಾಳಗಿ ತಾಲ್ಲೂಕು ಘಟಕದ ವತಿಯಿಂದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರಿ ಎಲ್ಲಾ ಕ್ಷೇತ್ರದ, ಎಲ್ಲಾ ವೃಂದದ 6 ಲಕ್ಷ ನೌಕರರು ಮಾರ್ಚ್ 1 ರಂದು ಮುಷ್ಕರ ನಡೆಸುತ್ತಿದ್ದೇವೆ. ಬೇಡಿಕೆ ಈಡೇರುವ ಬಗ್ಗೆ ಸರ್ಕಾರಿ ಆದೇಶ ಹೊಡಿಸಿದರಷ್ಟೇ ಮುಷ್ಕರ ವಾಪಾಸು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸ.ನೌ.ಸ.ಅಧ್ಯಕ್ಷ ಶರಣಗೌಡ ಪಾಟೀಲ, ಸದಸ್ಯ ರಮೇಶ ರಾಠೋಡ, ಜಗನ್ನಾಥ ಬಂಡಿ, ಸ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಶಿವಕುಮಾರ ಶಾಸ್ತ್ರೀ, ಶಿಕ್ಷಕ ಮಹಾಂತೇಶ ಪಂಚಾಳ,ವಅನೀಲ ಗುತ್ತೇದಾರ, ಸಂತೋಷ ಕಲ್ಮೂಡ, ಶೌಕತಾಲಿ ನವದಿಕರ್, ಡಾ.ಅಣ್ಣರಾವ ಪಾಟೀಲ, ಸಂತೋಷ ಶಿವಬೊ, ಎಮ್,ಎಸ್ ಪೂಜಾರಿ,ಬಡಾ.ದೀಪಕ ರಾಠೋಡ, ರವಿಂದ್ರ ಹುಣಚಿಕರ, ತಿಪ್ಪಯ್ಯ ಪತ್ತಿ, ರೇವಸಿದ್ದ ಕಮಲಾಪುರ, ಶಿವರಾಯ ಪಡಶೆಟ್ಟಿ, ರೇವಣಸಿದ್ದ ಕುಡ್ಡಳ್ಳಿ ಸೇರಿ ಇತರಿದ್ದರು